ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಲ್ಲಿ ಸಂಭಾವಿತರು ಎಂದು ತೋರಿಸಿಕೊಳ್ಳುವವರು ಆಗಾಗ ಕ್ಯಾಸಿನೊಕ್ಕಾಗಿ (ಜೂಜು ಕೇಂದ್ರ) ಸಿಂಗಪುರಕ್ಕೆ ಹೋಗುತ್ತಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಶನಿವಾರ, ಭಾನುವಾರ ಎಷ್ಟು ಅಧಿಕಾರಿಗಳು, ಶಾಸಕರು ಗೋವಾಗೆ ಕ್ಯಾಸಿನೊಗೆ ಹೋಗಿಬರುತ್ತಾರೆ ಎಂದು ಹೇಳಲಾಗದು. ಯಾರಿಗೆ ಎಷ್ಟು ಲಾಭವಾಯಿತು ಎಂಬುದೇ ಮರುದಿನ ವಿಧಾನಸಭೆ ಮೊಗಸಾಲೆಯ ಚರ್ಚೆ ವಿಷಯ. ವಾಸ್ತವಿಕ ಸತ್ಯ ಹೇಳಿದ್ದೇನೆ ಅಷ್ಟೆ’ ಎಂದು ಹೇಳಿದರು.