ಗಣೇಶ ಗಲ್ಲಿಯ ಪರಶುರಾಮ ಗಾಂವ್ಕರ ಮತ್ತು ನಾಗನಾಥ ಗಲ್ಲಿಯ ಚಂದ್ರಕಾಂತ್ ಎಂಬುವವರ ಮನೆಗಳಲ್ಲಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ. ದಾಳಿಯ ವೇಳೆ ವಿವಿಧ ಕಂಪನಿಗಳ 3,134 ಲೀಟರ್ ವಿಸ್ಕಿ, 228 ಲೀಟರ್ ಬಿಯರ್, ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹ 17.41 ಲಕ್ಷ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.