‘ಇಲ್ಲಿಯ ಆಚಾರ, ವಿಚಾರ, ಸಾಂಪ್ರದಾಯಿಕ ಪದ್ಧತಿ, ಪರಂಪರೆ, ಧಾರ್ಮಿಕ ಅಧ್ಯಾತ್ಮಿಕ ಚಿಂತನೆ, ವೇದ, ಸಂಸ್ಕೃತ ಹಾಗೂ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶವೇ ‘ಹೆರಿಟೇಜ್ ವಿಲೇಜ್’ನಕಲ್ಪನೆಯಾಗಿದೆ. ಯೋಜನೆಯಡಿ ಈ ಕ್ಷೇತ್ರಕ್ಕೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಮುಂದಿನ ಪೀಳಿಗೆಯವರಿಗೆ ಆದರ್ಶವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಅವರು ಹೇಳಿದರು.