‘ಬೆಂಗಳೂರಿನಲ್ಲಿ ಎಂಟು ವಲಯ ಮಾಡಿ, ಎಂಟು ಸಚಿವರಿಗೆ ಹೊಣೆ ನೀಡುವ ಮಾತನಾಡಿದ್ದೀರಿ. ಅದರೆ ಪರಸ್ಪರ ಹೊಂದಾಣಿಕೆಯ ಕೊರತೆಯನ್ನು ಮೊದಲಾಗಿ ನಿವಾರಿಸಿ. ಖಾಸಗಿ ವೈದ್ಯರಿಗೆ, ಸಿಬ್ಬಂದಿಗೆ ಸರ್ಕಾರದ ಸೌಲಭ್ಯ ವಿಸ್ತರಿಸಿ, ಬಿಐಇಸಿಗೆ ದಿನಕ್ಕೆ ₹ 80 ಲಕ್ಷ ಬಾಡಿಗೆ ಕೊಡುವ ನೀವು ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ. ಆಗ ರೋಗಿಗಳ ಕಷ್ಟವೂ ನಿವಾರಣೆಯಾಗುತ್ತದೆ. ಎಂದು ಕುಮಾರಸ್ವಾಮಿ ಹೇಳಿದ್ದಾರೆ.