‘ದೂರುದಾರ ಮುರಳೀಧರ್, ಸುನೀತಾಳನ್ನು ಸಂಪರ್ಕಿಸಿದ್ದರು. ವ್ಯಾಪಾರ ಆರಂಭಿಸಲು ಹಣ ಠೇವಣಿ ಇರಿಸಬೇಕೆಂದು ಆಕೆ ಹೇಳಿದ್ದಳು. ಅದನ್ನು ನಂಬಿದ್ದ ಮುರಳೀಧರ್, ಆಕೆ ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 1.48 ಕೋಟಿ ಜಮೆ ಮಾಡಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದರು.