‘ವಿಧಾನಮಂಡಲದ ಸಮಿತಿಗಳ ಅಧಿಕಾರ ಮೊಟಕು ಮಾಡುವ ಪ್ರಯತ್ನವನ್ನು ತಕ್ಷಣ ಕೈಬಿಡಬೇಕು. ಈ ಸಂಬಂಧ ಸಭಾಧ್ಯಕ್ಷರು ಲಘು ಪ್ರಕಟಣೆ 104 ನ್ನು ಹಿಂದಕ್ಕೆ ಪಡೆದು, ಭ್ರಷ್ಟಾಚಾರ ಪೋಷಿಸುವ ಕ್ರಮದ ಆದೇಶವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ಮೇ 19 ಮತ್ತು ಅದಕ್ಕೂ ಮೊದಲುಕೋವಿಡ್-19 ನಿರ್ವಹಣೆಗೆ ಅಗತ್ಯವಿರುವ ಪರಿಕರಗಳು, ಉಪಕರಣಗಳನ್ನು ಖರೀದಿಸುವಲ್ಲಿ ಅವ್ಯವಹಾರ ನಡೆದಿವೆ ಎಂಬ ದೂರುಗಳು ಪಿಎಸಿಗೆ ಸಲ್ಲಿಕೆಯಾಗಿವೆ. 3 ತಿಂಗಳ ಅವಧಿಯಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಮತ್ತು ಸಂದೇಹಾಸ್ಪದ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಅನೇಕ ದೂರುಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.