‘ಸಮೀಪದಲ್ಲಿ ಉದ್ಯಾನವಿದೆ. ಈ ಪರಿಸರದಲ್ಲಿ ದೊಡ್ಡ ಮರಗಳೂ ಇವೆ. ಅದರಲ್ಲಿ ಜೇನುಗೂಡುಗಳೂ ಇವೆ. ಅವು ಏಕಾಏಕಿ ದಾಳಿ ನಡೆಸಿದ್ದು ಏಕೆ ಎಂಬುದು ತಿಳಿದಿಲ್ಲ. ನೊಣಗಳು ಅನೇಕರಿಗೆ ಕಚ್ಚಿವೆ. ಕೆಲವರು ದಿಕ್ಕಾಪಾಲಾಗಿ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಆದರೆ ಅಜ್ಜನಿಗೆ ಓಡಲು ಆಗದೆ ನೊಣಗಳಿಂದ ಕಚ್ಚಿಸಿಕೊಳ್ಳಬೇಕಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.