ಬೀದರ್:2018-2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ 30 ಹಿರಿಯ ಕಲಾವಿದರ ಹೆಸರುಗಳನ್ನುಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ ಭಾನುವಾರ ಪ್ರಕಟಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಕಲಾವಿದರ ಹೆಸರನ್ನು ಘೋಷಿಸಿದ ಅವರು, ‘ಉತ್ತಮ ಕಲಾವಿದರನ್ನು, ಕಲೆಗಾಗಿ ಬದುಕು ಮುಡಿಪಾಗಿಟ್ಟವರನ್ನು ಆಯ್ಕೆ ಮಾಡಿದ್ದೇವೆ’ ಎಂದು ಹೇಳಿದರು.
ರಾಜ್ಯದ 30 ಜಿಲ್ಲೆಗಳ 30 ಹಿರಿಯ ಕಲಾವಿದರಿಗೆ ಹಾಗು ಇಬ್ಬರು ಜಾನಪದ ತಜ್ಞರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗಿದೆ.ಗೌರವ ಪ್ರಶಸ್ತಿ ಮೊತ್ತ 25,000 ರೂ. ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50,000 ರೂ. ಜೊತೆಗೆ ಸ್ಮರಣಿಕೆ ನೀಡಲಾಗುವುದು.