<p><strong>ಮಂಗಳೂರು:</strong> ಖ್ಯಾತ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾ ಲನಾಥ್ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನಡೆಯಲಿದೆ.</p>.<p>'ನಮ್ಮ ತಂದೆಯವರ ಹುಟ್ಟೂರು ಸಜಿಪ ಮಿತ್ತಕೆರೆಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ' ಎಂದು ಗೋಪಾಲನಾಥ್ ಅವರ ಕಿರಿಯ ಮಗ ಮಣಿಕಾಂತ್ ಕದ್ರಿ ತಿಳಿಸಿದರು.</p>.<p>ಮಂಗಳೂರಿನ ಪದವಿನಂಗಡಿ ದೇವಿ ಕಟ್ಟೆಯಿಂದ ಸೋಮವಾರ ಬೆಳಿಗ್ಗೆ 9 ಗಂಟೆಗೆ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ. 10 ಗಂಟೆಗೆ ಮೆರವಣಿಗೆ ಪುರಭವನ ತಲುಪಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಪಾರ್ಥಿವ ಶರೀರವನ್ನು ಸಜಿಪಕ್ಕೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.</p>.<p><strong>ಸೋಮವಾರ ಸಿವಿಲ್ ಐಡಿ ಲಭ್ಯ:</strong>ಗೋಪಾಲನಾಥ್ ಅವರ ಹಿರಿಯ ಮಗ ಗುರುಪ್ರಸಾದ್ ಕುವೈತ್ನಲ್ಲಿದ್ದು, ವೀಸಾ 'ಸ್ಟಾಂಪಿಂಗ್' ಮುಗಿದು ಸಿವಿಲ್ ಐಡಿ ದೊರಕದ ಕಾರಣ ಇನ್ನೂ ಮಂಗಳೂರು ತಲುಪಿಲ್ಲ.</p>.<p>ಭಾನುವಾರ ಮಧ್ಯಾಹ್ನ 'ಅಣ್ಣ ಗುರುಪ್ರಸಾದ್ ಅವರಿಗೆ ಸಿವಿಲ್ ಐಡಿ ದೊರಕಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ' ಎಂದು ಮಣಿಕಾಂತ್ ಕದ್ರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಖ್ಯಾತ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾ ಲನಾಥ್ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನಡೆಯಲಿದೆ.</p>.<p>'ನಮ್ಮ ತಂದೆಯವರ ಹುಟ್ಟೂರು ಸಜಿಪ ಮಿತ್ತಕೆರೆಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ' ಎಂದು ಗೋಪಾಲನಾಥ್ ಅವರ ಕಿರಿಯ ಮಗ ಮಣಿಕಾಂತ್ ಕದ್ರಿ ತಿಳಿಸಿದರು.</p>.<p>ಮಂಗಳೂರಿನ ಪದವಿನಂಗಡಿ ದೇವಿ ಕಟ್ಟೆಯಿಂದ ಸೋಮವಾರ ಬೆಳಿಗ್ಗೆ 9 ಗಂಟೆಗೆ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ. 10 ಗಂಟೆಗೆ ಮೆರವಣಿಗೆ ಪುರಭವನ ತಲುಪಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಪಾರ್ಥಿವ ಶರೀರವನ್ನು ಸಜಿಪಕ್ಕೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.</p>.<p><strong>ಸೋಮವಾರ ಸಿವಿಲ್ ಐಡಿ ಲಭ್ಯ:</strong>ಗೋಪಾಲನಾಥ್ ಅವರ ಹಿರಿಯ ಮಗ ಗುರುಪ್ರಸಾದ್ ಕುವೈತ್ನಲ್ಲಿದ್ದು, ವೀಸಾ 'ಸ್ಟಾಂಪಿಂಗ್' ಮುಗಿದು ಸಿವಿಲ್ ಐಡಿ ದೊರಕದ ಕಾರಣ ಇನ್ನೂ ಮಂಗಳೂರು ತಲುಪಿಲ್ಲ.</p>.<p>ಭಾನುವಾರ ಮಧ್ಯಾಹ್ನ 'ಅಣ್ಣ ಗುರುಪ್ರಸಾದ್ ಅವರಿಗೆ ಸಿವಿಲ್ ಐಡಿ ದೊರಕಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ' ಎಂದು ಮಣಿಕಾಂತ್ ಕದ್ರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>