ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಿವಿನಾಯಕ ಮಂಡಿಯವರು ಸಾಂಕೇತಿಕ ಪರಿಹಾರ ಕೇಳಿದ್ದು, ಬ್ಯಾಂಕ್ನವರು ಇದಕ್ಕೆ ಒಪ್ಪಿ ಪರಿಹಾರ ಎಂದೇ ಮಂಡಿಯವರ ಖಾತೆಗೆ ₹ 3ನ್ನು ಜಮಾ ಕೂಡ ಮಾಡಿದ್ದರು. 2018ರ ಸೆ. 9ರಂದು ಇದೇ ಮಂಡಿಯವರು ಕನ್ನಡದಲ್ಲಿ ಬರೆದ ಮತ್ತೊಂದು ಚೆಕ್ ಅನ್ನು ಬೆಳೆಗಾರರಿಗೆ ನೀಡಿದ್ದು, ಅದನ್ನು ಕೂಡ ನಗದೀಕರಿಸಲು ನಿರಾಕರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬ್ಯಾಂಕಿಂಗ್ ಒಂಬುಡ್ಸ್ಮನ್ ₹ 5 ಸಾವಿರ ದಂಡ ಪಾವತಿಸಬೇಕು ಎಂದು ತೀರ್ಪು ನೀಡಿದೆ.