ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚೆಕ್ ನಿರಾಕರಣೆ: ದಂಡ

Last Updated 25 ಜೂನ್ 2019, 18:28 IST
ಅಕ್ಷರ ಗಾತ್ರ

ಸಾಗರ: ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಚೆಕ್ ಅನ್ನು ನಗದೀಕರಿಸಲು ನಿರಾಕರಿಸಿದ ಕಾರಣಕ್ಕೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್ ₹ 5 ಸಾವಿರ ದಂಡ ವಿಧಿಸಿರುವ ಪ್ರಕರಣ ನಡೆದಿದೆ.

ಇಲ್ಲಿನ ಸಿದ್ಧಿವಿನಾಯಕ ಅಡಿಕೆ ಮಂಡಿಯವರು 2018ರ ಫೆಬ್ರುವರಿಯಲ್ಲಿ ಬೆಳೆಗಾರರಿಗೆ ವಿತರಿಸಿದ್ದ ಎರಡು ಚೆಕ್ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಮರಳಿ ಬಂದಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಿವಿನಾಯಕ ಮಂಡಿಯವರು ಸಾಂಕೇತಿಕ ಪರಿಹಾರ ಕೇಳಿದ್ದು, ಬ್ಯಾಂಕ್‌ನವರು ಇದಕ್ಕೆ ಒಪ್ಪಿ ಪರಿಹಾರ ಎಂದೇ ಮಂಡಿಯವರ ಖಾತೆಗೆ ₹ 3ನ್ನು ಜಮಾ ಕೂಡ ಮಾಡಿದ್ದರು. 2018ರ ಸೆ. 9ರಂದು ಇದೇ ಮಂಡಿಯವರು ಕನ್ನಡದಲ್ಲಿ ಬರೆದ ಮತ್ತೊಂದು ಚೆಕ್ ಅನ್ನು ಬೆಳೆಗಾರರಿಗೆ ನೀಡಿದ್ದು, ಅದನ್ನು ಕೂಡ ನಗದೀಕರಿಸಲು ನಿರಾಕರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬ್ಯಾಂಕಿಂಗ್ ಒಂಬುಡ್ಸ್‌ಮನ್ ₹ 5 ಸಾವಿರ ದಂಡ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT