<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ವಿದ್ಯಾರ್ಥಿಗಳ ಮೇಲೆ ಪರಕೀಯರು ಹೇರಿರುವ ಇಂಗ್ಲಿಷಿನ ಹೆಣಭಾರದ ಚಪ್ಪಡಿಯನ್ನು ಕಿತ್ತೊಗೆಯಬೇಕು.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಇಂಗ್ಲಿಷ್ ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ!</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ<br />ಅರ್ಥಶೂನ್ಯವಾಗುತ್ತದೆ.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹ್ಯಾಗಿದೆ? ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಸುರುವಾಗಿವೆ.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಶಿಕ್ಷಣ ಮಾಧ್ಯಮವಾಗಲು ಕನ್ನಡ ಸಮರ್ಥವಾಗಿದೆ. ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ ಅರ್ಥಶೂನ್ಯವಾಗುತ್ತದೆ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ ವ್ಯಾಮೋಹಪೋತ ಇಂಗ್ಲಿಷ್ಗೆ ಬಲಿಗೊಡುವುದೇನು?</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ ಇಂಗ್ಲಿಷ್. ಯಾವುದೇ ಭಾಷೆ ಮನುಷ್ಯನ ತಿಳಿವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವವಾಗದೆ ಹೋಗಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಿಗೆ ದೊರೆಯುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾದವನು.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ; ಆಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಭಾರತೀಯರನ್ನು ಶತಶತ<br />ಮಾನಗಳಿಂದ ಅಖಂಡವಾಗಿಟ್ಟಿರುವುದು ಅಧ್ಯಾತ್ಮ ಶಕ್ತಿ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಇಂಗ್ಲಿಷ್ ಎಂಬ ಸಂಕೋಲೆಯ ಭಾರವೇ ಅಭ್ಯಾಸವಾಗಿ ನಡೆ ಕಲಿತ ಕೆಲವರಿಗೆ ಅದರಿಂದ ಬಿಡುಗಡೆ ಹೊಂದುವ ಇಷ್ಟವೂ ಇಲ್ಲ; ಸಂಕೋಲೆ ಹಾಕಿಕೊಳ್ಳದೆ ಕಲಿತ ನಡೆ ಶಿಷ್ಟಾಚಾರ ಸಮ್ಮತವಾಗುವುದಿಲ್ಲ ಎಂಬ ಹಾಸ್ಯಾಸ್ಪದ ಅಭಿಪ್ರಾಯ ಅವರದು.</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಈಗ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿವೆ. ‘ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ’ ಎಂದು ಪಂಡಿತರು ಹೇಳುತ್ತಿದ್ದಾರೆ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ವಿದ್ಯಾರ್ಥಿಗಳಾದ ನಮ್ಮ ಮಕ್ಕಳಿಗೆ ಬೇಕಾಗಿರುವ ಒಂದು ಬಟ್ಟಲು ಹಾಲನ್ನು ಮಣಭಾರದ ಇಂಗ್ಲಿಷ್ ಕಡಾಯಿಯಲ್ಲಿ ಹಾಕಿಕೊಟ್ಟರೆ ಅವರು ಕುಡಿಯುವುದೆಂತು? ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ<br />ವ್ಯಾಮೋಹಪೋತನಿಗೆ ಬಲಿಗೊಡುವುದೇನು?</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲಿಷ್ ಪಠ್ಯವಾಗಲಿ, ಆಯಾ ವರ್ಷವೇ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಈ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಮುಂದೆ ಬರಬೇಕು ಮತ್ತು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಸರ್ಕಾರದ ಅಪ್ಪಣೆಗೆ ಕಾಯುತ್ತಾ ಕೂರಬಾರದು..</p>.<p><strong>ಇವನ್ನೂ ಓದಿ...</strong></p>.<p><strong>*<a href="https://cms.prajavani.net/604527.html">ಧ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ</a></strong></p>.<p><strong>*<a href="https://cms.prajavani.net/sahitya-sammelana/kannada-sahithya-sammelan-604528.html">ಮೊಳಗಿತು ಕನ್ನಡದ ಕಹಳೆ:ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ</a></strong></p>.<p><strong>*<a href="https://cms.prajavani.net/district/dharwad/kannada-sahithya-sammelena-604529.html">ಸಮ್ಮೇಳನ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ</a></strong></p>.<p><strong>*<a href="https://cms.prajavani.net/district/dharwad/dharwad-kannada-sahithya-604532.html">ಸಮ್ಮೇಳನ: ಹೊಸ ನೋಂದಣಿಗೆ ಅವಕಾಶಕ್ಕೆ ಆಗ್ರಹಿಸಿ ಕನ್ನಡಾಭಿಮಾನಿಗಳ ಧರಣಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ವಿದ್ಯಾರ್ಥಿಗಳ ಮೇಲೆ ಪರಕೀಯರು ಹೇರಿರುವ ಇಂಗ್ಲಿಷಿನ ಹೆಣಭಾರದ ಚಪ್ಪಡಿಯನ್ನು ಕಿತ್ತೊಗೆಯಬೇಕು.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಇಂಗ್ಲಿಷ್ ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ!</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ<br />ಅರ್ಥಶೂನ್ಯವಾಗುತ್ತದೆ.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹ್ಯಾಗಿದೆ? ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಸುರುವಾಗಿವೆ.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಶಿಕ್ಷಣ ಮಾಧ್ಯಮವಾಗಲು ಕನ್ನಡ ಸಮರ್ಥವಾಗಿದೆ. ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ ಅರ್ಥಶೂನ್ಯವಾಗುತ್ತದೆ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ ವ್ಯಾಮೋಹಪೋತ ಇಂಗ್ಲಿಷ್ಗೆ ಬಲಿಗೊಡುವುದೇನು?</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ ಇಂಗ್ಲಿಷ್. ಯಾವುದೇ ಭಾಷೆ ಮನುಷ್ಯನ ತಿಳಿವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು.</p>.<p>***</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವವಾಗದೆ ಹೋಗಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಿಗೆ ದೊರೆಯುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾದವನು.</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ; ಆಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಭಾರತೀಯರನ್ನು ಶತಶತ<br />ಮಾನಗಳಿಂದ ಅಖಂಡವಾಗಿಟ್ಟಿರುವುದು ಅಧ್ಯಾತ್ಮ ಶಕ್ತಿ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ಇಂಗ್ಲಿಷ್ ಎಂಬ ಸಂಕೋಲೆಯ ಭಾರವೇ ಅಭ್ಯಾಸವಾಗಿ ನಡೆ ಕಲಿತ ಕೆಲವರಿಗೆ ಅದರಿಂದ ಬಿಡುಗಡೆ ಹೊಂದುವ ಇಷ್ಟವೂ ಇಲ್ಲ; ಸಂಕೋಲೆ ಹಾಕಿಕೊಳ್ಳದೆ ಕಲಿತ ನಡೆ ಶಿಷ್ಟಾಚಾರ ಸಮ್ಮತವಾಗುವುದಿಲ್ಲ ಎಂಬ ಹಾಸ್ಯಾಸ್ಪದ ಅಭಿಪ್ರಾಯ ಅವರದು.</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಈಗ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿವೆ. ‘ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ’ ಎಂದು ಪಂಡಿತರು ಹೇಳುತ್ತಿದ್ದಾರೆ.</p>.<p>***</p>.<p><strong>ಆಗ ಕುವೆಂಪು (ಧಾರವಾಡ, ಮೇ 7, 1957)</strong></p>.<p>l ವಿದ್ಯಾರ್ಥಿಗಳಾದ ನಮ್ಮ ಮಕ್ಕಳಿಗೆ ಬೇಕಾಗಿರುವ ಒಂದು ಬಟ್ಟಲು ಹಾಲನ್ನು ಮಣಭಾರದ ಇಂಗ್ಲಿಷ್ ಕಡಾಯಿಯಲ್ಲಿ ಹಾಕಿಕೊಟ್ಟರೆ ಅವರು ಕುಡಿಯುವುದೆಂತು? ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ<br />ವ್ಯಾಮೋಹಪೋತನಿಗೆ ಬಲಿಗೊಡುವುದೇನು?</p>.<p><strong>ಈಗ ಕಂಬಾರ (ಧಾರವಾಡ, ಜ.4, 2019)</strong></p>.<p>l ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲಿಷ್ ಪಠ್ಯವಾಗಲಿ, ಆಯಾ ವರ್ಷವೇ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಈ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಮುಂದೆ ಬರಬೇಕು ಮತ್ತು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಸರ್ಕಾರದ ಅಪ್ಪಣೆಗೆ ಕಾಯುತ್ತಾ ಕೂರಬಾರದು..</p>.<p><strong>ಇವನ್ನೂ ಓದಿ...</strong></p>.<p><strong>*<a href="https://cms.prajavani.net/604527.html">ಧ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ</a></strong></p>.<p><strong>*<a href="https://cms.prajavani.net/sahitya-sammelana/kannada-sahithya-sammelan-604528.html">ಮೊಳಗಿತು ಕನ್ನಡದ ಕಹಳೆ:ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ</a></strong></p>.<p><strong>*<a href="https://cms.prajavani.net/district/dharwad/kannada-sahithya-sammelena-604529.html">ಸಮ್ಮೇಳನ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ</a></strong></p>.<p><strong>*<a href="https://cms.prajavani.net/district/dharwad/dharwad-kannada-sahithya-604532.html">ಸಮ್ಮೇಳನ: ಹೊಸ ನೋಂದಣಿಗೆ ಅವಕಾಶಕ್ಕೆ ಆಗ್ರಹಿಸಿ ಕನ್ನಡಾಭಿಮಾನಿಗಳ ಧರಣಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>