‘ಮಹಾಕೂಟ ಶಿವಯೋಗ ಮಂದಿರ ಮತ್ತು ಬನಶಂಕರಿಯಲ್ಲಿ ಸಾಕಷ್ಟು ಯಾತ್ರಿ ನಿವಾಸಗಳಿದ್ದರೂ ಪ್ರವಾಸಿಗರು, ಭಕ್ತರ ಕೊರತೆ ಇದೆ. ಅಲ್ಲಿ ಪ್ರವಾಸಿ ಮಂದಿರಗಳನ್ನು ನಿರ್ಮಿಸಿ ದಶಕಗಳಾದರೂ ಅವುಗಳು ಇನ್ನೂ ಆರಂಭವಾಗಿಲ್ಲ.ಹಾಗಾಗಿ ತ್ರಿ–ಸ್ಟಾರ್ ಹೋಟೆಲ್ ಬೇಡ. ಹಂಪಿ ಕನ್ನಡ ವಿ.ವಿ ಕೇಂದ್ರ ಅಲ್ಲೇ ಉಳಿಸಬೇಕು. ಸ್ಥಳಾಂತರ ಮಾಡಿದರೆ ಹೋರಾಟ ನಡೆಸುತ್ತೇವೆ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ಎಚ್ಚರಿಕೆ ನೀಡಿದರು.