ತಪ್ಪು ಮಾಹಿತಿ ಪೂರೈಕೆ, ಅಪಪ್ರಚಾರ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಯುವಕರೊಳಗೆ ತುಂಬಿ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಆ ಮೂಲಕ ಜನವಿರೋಧಿ ರಾಜಕಾರಣ ಬಲಗೊಳ್ಳುತ್ತಿದೆ ಎಂದರು. ದೇಶದಲ್ಲಿ ಈಗ ಯುವಕರ ಮುಂದೆ ಉದ್ಯೋಗದ ಆಯ್ಕೆಯ ಅವಕಾಶಗಳಿಲ್ಲ. ಭಾರತೀಯ ಯುವಕರನ್ನು ಕಡಿಮೆ ದರಕ್ಕೆ ಸಿಗುವ ಕಾರ್ಮಿಕರನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.