ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ಕ್ಕೆ ಉಪಚುನಾವಣೆ

Last Updated 21 ಸೆಪ್ಟೆಂಬರ್ 2019, 7:49 IST
ಅಕ್ಷರ ಗಾತ್ರ

ನವದೆಹಲಿ: ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ರಂದು ಉಪಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದೆ.

ಒಟ್ಟು 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿತ್ತು. ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರಗಳ ಚುನಾವಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಉಳಿದ15 ಕ್ಷೇತ್ರಗಳಿಗೆಚುನಾವಣೆ ನಡೆಯಲಿದೆ.

ಅಕ್ಟೋಬರ್‌ 21ರಂದು ಚುನಾವಣೆ ನಡೆಯಲಿದ್ದು ಅ.24ಕ್ಕೆ ಫಲಿತಾಂಶ ಹೊರ ಬರಲಿದೆ. ಉಪಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳು:ಗೋಕಾಕ್, ಅಥಣಿ,ರಾಣೆಬೆನ್ನೂರು,ಕಾಗವಾಡ, ಹಿರೇಕೆರೂರು,ವಿಜಯನಗರ, ಯಲ್ಲಾಪುರ, ಚಿಕ್ಕಬಳ್ಳಾಪುರ,ಹುಣಸೂರು, ಕೆ.ಆರ್.ಪೇಟೆ,ಹೊಸಕೋಟೆ,ಕೆ.ಆರ್.ಪುರಂ,ಮಹಾಲಕ್ಷ್ಮಿ ಲೇ ಔಟ್,ಯಶವಂತಪುರ, ಶಿವಾಜಿನಗರ.

ಉಪಚುಣಾವಣೆ ಅಧಿಸೂಚನೆಯ ಪ್ರಕಟಣೆ ದಿನಾಂಕ: 23–09–2019

ನಾಮಪತ್ರ ಸಲ್ಲಿಸಲು ಕಡೆ ದಿನಾಂಕ: 30–09–2019

ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕ: 03–10–2019

ಮತದಾನ ದಿನಾಂಕ: 21–10–2019

ಫಲಿತಾಂಶ ದಿನಾಂಕ: 24–10–2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT