ಬೆಂಗಳೂರು: ‘ರಾಜಕಾರಣದ ಬಗ್ಗೆ ಜಿಗುಪ್ಸೆ ಬಂದಿದ್ದು ನಿಜ. ಆದರೆ, ರಾಜಕಾರಣದಿಂದ ಓಡಿ ಹೋಗುವವನಲ್ಲ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಪಕ್ಷ ಅದನ್ನು ಒಪ್ಪಲಿಲ್ಲ. 1983 ಚುನಾವಣೆಗೆ ಮತ್ತು ಈಗಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಕೆ.ಆರ್.ರಮೇಶ್ಕುಮಾರ್, ಎಲ್ಲಿಯವರೆಗೆ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ರಾಜಕೀಯದಲ್ಲಿ ನೀವು ಮುಂದುವರಿಯಬೇಕು ಎಂದು ಹೇಳಿದರು.