ಜಿ.ಟಿ. ದೇವೇಗೌಡರಿಗೆ ಉಂಟಾಗಿರುವ ಅಸಮಾಧಾನದ ಬಗ್ಗೆ ಪ್ರಸ್ತಾಪಿಸಿ, ‘ನಮ್ಮ ಪಕ್ಷಕ್ಕೆ ಸ್ವಾಭಿಮಾನ ಇದೆ, ಶಕ್ತಿ ಇದೆ, ದೈವ ಬಲವೂ ಇದೆ. ನಿಮ್ಮ ಕಣ್ಣು ಮುಂದೆಯೇ ಈ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಅಲ್ಲಿಯವರೆಗೂ ನನಗೆ ದೇವರು ಆಯಸ್ಸು ಕೊಟ್ಟಿದ್ದಾನೆ.ನೀವು ಇನ್ನೂ ಚಿಕ್ಕವರು, ನನಗೀಗ 86 ವರ್ಷ. ನಮ್ಮ ಪಕ್ಷ ಒಂದು ದಿನ ಅಧಿಕಾರಕ್ಕೆ ಬರುತ್ತದೆ, ಆಗ ನಿಮ್ಮನ್ನು ಕರೆದುಒಳ್ಳೆಯ ಔತಣ ಕೊಡುತ್ತೇನೆ’ ಎಂದರು.