ನೋವಿನ ಕಥೆ: ಪ್ರಭು ಅವರು ದುರಂತದ ಸ್ಥಳದಲೇ ಮೊದಲು ವಾಸವಿದ್ದರು. ಎರಡು ವರ್ಷಗಳ ಹಿಂದೆ ಎರಡೂವರೆ ಕಿ.ಮೀ ದೂರದ ಬೆಟ್ಟದ ತಪ್ಪಲಿನಲ್ಲಿ ಮನೆ ನಿರ್ಮಿಸಿಕೊಂಡು, ಅಲ್ಲಿಗೆ ಸ್ಥಳಾಂತರವಾಗಿದ್ದರು. ಕೃಷಿ, ಅಂಗಡಿ ನಡೆಸುತ್ತ ಬದುಕು ಕಟ್ಟಿಕೊಂಡಿದ್ದರು. ಆದರೆ, ಪ್ರವಾಹ– ಭೂಕುಸಿತ ಅವರ ಕುಟುಂಬವನ್ನೇ ಕಿತ್ತುಕೊಂಡಿದೆ.