‘ನಾನು ಇದೇ ಕಾಲಮಾನದಲ್ಲಿ ಕಾದಂಬರಿ ರಚಿಸುತ್ತಿದ್ದೆ. ಆಗ, ಭೈರಪ್ಪ ಕಾದಂಬರಿಕಾರನೇ ಅಲ್ಲ. ಆತ ಕೇವಲ ಚರ್ಚಾಪಟು, ಗೊಡ್ಡು ಭಾರತೀಯ ಎಂದೆಲ್ಲಾ ನವ್ಯರು ಹೀಯಾಳಿಸಿದರು. ಅಲ್ಲದೇ, ಪತ್ರಿಕೆಗಳೂ ನನ್ನನ್ನು ಬೆಂಬಲಿಸಲಿಲ್ಲ. ಒಂದೇ ಒಂದು ವಿಮರ್ಶೆ ಪ್ರಕಟಿಸಲಿಲ್ಲ. ಕೃತಿ ಬಿಡುಗಡೆಯಾದರೆ ಒಂದು ವಾಕ್ಯ ಬರೆಯಲಿಲ್ಲ. ಆದರೂ, ನಾನು ನವ್ಯ ಸಾಹಿತಿಗಳನ್ನು ಹಿಂದಿಕ್ಕಿ ದೇಶದ ಅತ್ಯುತ್ತಮ ಕಾದಂಬರಿಕಾರನಾಗಿ ಬೆಳೆದೆ. ಓದುಗರು ನನ್ನನ್ನು ಬೆಳೆಸಿದರು. ದೇಶದ ವಿವಿಧ ಭಾಷೆಗಳಿಗೆ ನನ್ನ ಕೃತಿಗಳು ಭಾಷಾಂತರಗೊಂಡವು’ ಎಂದು ಸ್ಮರಿಸಿದರು.