ಬೆಂಗಳೂರು: ಕೋವಿಡ್ 19 ಭೀತಿಯಿಂದ ಕೆಎಸ್ಆರ್ಟಿಸಿಗೆ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಕಳೆದ 15 ದಿನಗಳ ಸಂಸ್ಥೆಯ ವರಮಾನದಲ್ಲಿ ₹3.40 ಕೋಟಿ ಕೋತಾ ಆಗಿದೆ.
ಮಾ.15ರಂದು ಭಾನುವಾರ ಒಂದೇ ದಿನ 734 ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಕೆಎಸ್ಆರ್ಟಿಸಿ ರದ್ದು ಮಾಡಿದ್ದು, ಅಂದು ₹ 1.04ಕೋಟಿ ವರಮಾನ ಕೋತಾ ಆಗಿದೆ.
ಹವಾನಿಯಂತ್ರಿತ ಐಷಾರಾಮಿ ಬಸ್ಗಳನ್ನು ಹತ್ತಲು ಜನ ಹಿಂದೇಟು ಹಾಕುತ್ತಿದ್ದು, ಬಹುತೇಕ ಈ ಬಸ್ಗಳ ಮಾರ್ಗವನ್ನೇ ರದ್ದುಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.