<p><strong>ಮೈಸೂರು:</strong> ರಾಜ್ಯದೆಲ್ಲೆಡೆ ಬಿತ್ತನೆಯಾಗಿರುವ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು, ಕೀಟನಾಶಕ ಸಿಂಪಡಿಸಿದರೂ ಒಂದೆರಡು ದಿನಗಳ ನಂತರ ಹುಳುಗಳು ಮತ್ತೆ ದಾಳಿ ಮಾಡಿ ಬೆಳೆನಾಶ ಪಡಿಸುತ್ತಿವೆ.</p>.<p>ಮುಂಗಾರು ಮತ್ತು ನಂತರದಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ತಿಂದುಹಾಕಿವೆ. ಈ ಕುರಿತು ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಆಫ್ರಿಕಾದಲ್ಲಿ 2016ರಲ್ಲಿ ಕಾಣಿಸಿಕೊಂಡು ಅಲ್ಲಿ ಆಹಾರ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾದ ‘ಫಾಲ್ ಆರ್ಮಿ ವರ್ಮ್‘ ಎಂದು ಪತ್ತೆ ಹಚ್ಚಿದ್ದಾರೆ.</p>.<p>ಈ ಹುಳುಗಳು 80 ಬಗೆಯ ಬೆಳೆಗಳ ಎಲೆಗಳನ್ನು ತಿನ್ನುತ್ತವೆ. ನಿಯಂತ್ರಿಸದಿದ್ದರೆ ದೇಶದ ಆಹಾರ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಚ್ಎಸ್) ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.</p>.<p>ಇದನ್ನು ಖಚಿತಪಡಿಸಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ನ್ಯಾಷನಲ್ ಬ್ಯೂರೊ ಆಫ್ ಅಗ್ರಿಕಲ್ಚರ್ ಇನ್ಸೆಟ್ ರಿಸೋರ್ಸ್ (ಎನ್ಎಐಆರ್) ವಿವರವಾದ ವರದಿ ಪ್ರಕಟಿಸಿದೆ. ಚಿಕ್ಕಬಳ್ಳಾಪುರದಲ್ಲಿ ಬಿತ್ತನೆಯಾಗಿರುವ 42,053 ಹೆಕ್ಟೇರ್ ಪ್ರದೇಶದ ಶೇ 70ರಷ್ಟು ಪ್ರದೇಶ ಈ ಕೀಟಬಾಧೆಗೆ ತುತ್ತಾಗಿದೆ ಎಂದು ಅದು ತಿಳಿಸಿದೆ.</p>.<p>ರಾಜ್ಯದ ಉದ್ದಗಲಕ್ಕೂ ಈ ಹುಳುಗಳು ಹರಡಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಆಫ್ರಿಕಾದಿಂದ ಅಮೆರಿಕಕ್ಕೆ ಹರಡಿದ ಈ ಕೀಟಗಳ ಮೊಟ್ಟೆಗಳು ನಂತರ ಅಲ್ಲಿಂದ ಆಮದಾಗುವ ಸಾಮಗ್ರಿಗಳ ಕಂಟೇನರ್ಗಳ ಮೂಲಕ ಭಾರತಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. 30 ಗಂಟೆಗಳಲ್ಲಿ 3,600 ಕಿ.ಮೀ ದೂರದವರೆಗೂ ಕ್ರಮಿಸುವ ಶಕ್ತಿ ಪಡೆದಿವೆ. ಹೀಗಾಗಿ, ಇವು ಅತಿ ವೇಗದಲ್ಲಿ ಪಸರಿಸುತ್ತವೆ.</p>.<p>ಕೃಷಿ ಇಲಾಖೆ ನೀಡಿದ ಸಲಹೆಯಂತೆ ಕ್ಲೋರೋಫೈರಿಫಾಸ್ ದ್ರಾವಣ ಸಿಂಪಡಿಸಿದರೂ ತಡೆಗಟ್ಟಲು ಸಾಧ್ಯವಾಗಿಲ್ಲ. ಮುಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿದ ಬೆಳೆಯನ್ನು ಕಾಡಿಲ್ಲ. ಆಗಸ್ಟ್ ನಂತರ ಬಿತ್ತನೆ ಮಾಡಿದ ಶೇ 80ರಷ್ಟು ಬೆಳೆ ಕೀಟಬಾಧೆಗೆ ತುತ್ತಾಗಿದೆ.</p>.<p>ಅಕ್ಟೋಬರ್ನಲ್ಲಿ ಲುಧಿಯಾನದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ 13ನೇ ಏಷ್ಯನ್ಮೆಕ್ಕೆಜೋಳ ಸಮ್ಮೇಳನದಲ್ಲಿ ಈ ವಿಷಯವನ್ನೇ ಚರ್ಚಿಸಲಾಗಿದೆ.</p>.<p><strong>ನಿಯಂತ್ರಣಕ್ಕೆ ಕಾರ್ಯಾಗಾರ</strong></p>.<p>ಮೈಸೂರಿನ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರವು ‘ಫಾಲ್ ಆರ್ಮಿ ವರ್ಮ್‘ ಹುಳುಗಳ ಹತೋಟಿ ಕುರಿತು ಈಚೆಗೆ ವಿಜ್ಞಾನಿಗಳ ಜತೆ ರೈತರ ಸಂವಾದ ಕಾರ್ಯಾಗಾರವನ್ನು ಏರ್ಪಡಿಸಿತ್ತು. ನಿಯಂತ್ರಣಕ್ಕೆ ಸಾವಯವ ವಿಧಾನಗಳನ್ನು ರೈತರಿಗೆ ಪರಿಚಯಿಸಲಾಯಿತು.</p>.<p>‘ಇದೊಂದು ಹೊಸ ಬಗೆಯ ಕೀಟ. ಬಾತುಕೋಳಿಗಳನ್ನು ಬಿಟ್ಟರೆ ಇಂತಹ ಹುಳುಗಳನ್ನು ತಿನ್ನುತ್ತವೆ. ಹುಳುಗಳ ಬೆಳವಣಿಗೆಯ 1ನೇ ಮತ್ತು 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಿದರೆ ಹತೋಟಿ ಸಾಧ್ಯ’ ಎಂದು ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಸಿ.ಗೋವಿಂದರಾಜು ಹೇಳಿದರು.</p>.<p><strong>ರಾಜ್ಯದಲ್ಲಿ ಬಿತ್ತನೆ ಪ್ರಮಾಣ (ಹೆಕ್ಟೇರ್)</strong></p>.<p>ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.</p>.<p><strong>ರಾಜ್ಯದಲ್ಲಿ ಮೆಕ್ಕೆಜೋಳ ಬಿತ್ತನೆ ಪ್ರಮಾಣ (ಹೆಕ್ಟೇರ್)</strong></p>.<p>ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.</p>.<p>* ರೈತರು ಒಟ್ಟಾಗಿ ಕೀಟನಾಶಕ ಸಿಂಪಡಿಸಿದರೆ ಹತೋಟಿಗೆ ತರಬಹುದು. ಮುಂದಿನ ವರ್ಷ ಹುಳುಗಳ ಬೆಳವಣಿಯ 1ನೇ, 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಬೇಕು</p>.<p><em>-ಡಾ.ಸಿ.ಗೋವಿಂದರಾಜು, ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕ. ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಘಟಕ, ಮೈಸೂರು</em></p>.<p>* ಮೈಸೂರು ಜಿಲ್ಲೆಯಲ್ಲಿ ಸೈನಿಕ ಹುಳು ಕಾಟ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗಗಳಲ್ಲಿ ಅರಿವು ಮೂಡಿಸಲಾಗಿದೆ</p>.<p><em>-ಮಹಾಂತಪ್ಪ, ಜಂಟಿ ಕೃಷಿ ನಿರ್ದೇಶಕ, ಮೈಸೂರು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದೆಲ್ಲೆಡೆ ಬಿತ್ತನೆಯಾಗಿರುವ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು, ಕೀಟನಾಶಕ ಸಿಂಪಡಿಸಿದರೂ ಒಂದೆರಡು ದಿನಗಳ ನಂತರ ಹುಳುಗಳು ಮತ್ತೆ ದಾಳಿ ಮಾಡಿ ಬೆಳೆನಾಶ ಪಡಿಸುತ್ತಿವೆ.</p>.<p>ಮುಂಗಾರು ಮತ್ತು ನಂತರದಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ತಿಂದುಹಾಕಿವೆ. ಈ ಕುರಿತು ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಆಫ್ರಿಕಾದಲ್ಲಿ 2016ರಲ್ಲಿ ಕಾಣಿಸಿಕೊಂಡು ಅಲ್ಲಿ ಆಹಾರ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾದ ‘ಫಾಲ್ ಆರ್ಮಿ ವರ್ಮ್‘ ಎಂದು ಪತ್ತೆ ಹಚ್ಚಿದ್ದಾರೆ.</p>.<p>ಈ ಹುಳುಗಳು 80 ಬಗೆಯ ಬೆಳೆಗಳ ಎಲೆಗಳನ್ನು ತಿನ್ನುತ್ತವೆ. ನಿಯಂತ್ರಿಸದಿದ್ದರೆ ದೇಶದ ಆಹಾರ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಚ್ಎಸ್) ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.</p>.<p>ಇದನ್ನು ಖಚಿತಪಡಿಸಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ನ್ಯಾಷನಲ್ ಬ್ಯೂರೊ ಆಫ್ ಅಗ್ರಿಕಲ್ಚರ್ ಇನ್ಸೆಟ್ ರಿಸೋರ್ಸ್ (ಎನ್ಎಐಆರ್) ವಿವರವಾದ ವರದಿ ಪ್ರಕಟಿಸಿದೆ. ಚಿಕ್ಕಬಳ್ಳಾಪುರದಲ್ಲಿ ಬಿತ್ತನೆಯಾಗಿರುವ 42,053 ಹೆಕ್ಟೇರ್ ಪ್ರದೇಶದ ಶೇ 70ರಷ್ಟು ಪ್ರದೇಶ ಈ ಕೀಟಬಾಧೆಗೆ ತುತ್ತಾಗಿದೆ ಎಂದು ಅದು ತಿಳಿಸಿದೆ.</p>.<p>ರಾಜ್ಯದ ಉದ್ದಗಲಕ್ಕೂ ಈ ಹುಳುಗಳು ಹರಡಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಆಫ್ರಿಕಾದಿಂದ ಅಮೆರಿಕಕ್ಕೆ ಹರಡಿದ ಈ ಕೀಟಗಳ ಮೊಟ್ಟೆಗಳು ನಂತರ ಅಲ್ಲಿಂದ ಆಮದಾಗುವ ಸಾಮಗ್ರಿಗಳ ಕಂಟೇನರ್ಗಳ ಮೂಲಕ ಭಾರತಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. 30 ಗಂಟೆಗಳಲ್ಲಿ 3,600 ಕಿ.ಮೀ ದೂರದವರೆಗೂ ಕ್ರಮಿಸುವ ಶಕ್ತಿ ಪಡೆದಿವೆ. ಹೀಗಾಗಿ, ಇವು ಅತಿ ವೇಗದಲ್ಲಿ ಪಸರಿಸುತ್ತವೆ.</p>.<p>ಕೃಷಿ ಇಲಾಖೆ ನೀಡಿದ ಸಲಹೆಯಂತೆ ಕ್ಲೋರೋಫೈರಿಫಾಸ್ ದ್ರಾವಣ ಸಿಂಪಡಿಸಿದರೂ ತಡೆಗಟ್ಟಲು ಸಾಧ್ಯವಾಗಿಲ್ಲ. ಮುಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿದ ಬೆಳೆಯನ್ನು ಕಾಡಿಲ್ಲ. ಆಗಸ್ಟ್ ನಂತರ ಬಿತ್ತನೆ ಮಾಡಿದ ಶೇ 80ರಷ್ಟು ಬೆಳೆ ಕೀಟಬಾಧೆಗೆ ತುತ್ತಾಗಿದೆ.</p>.<p>ಅಕ್ಟೋಬರ್ನಲ್ಲಿ ಲುಧಿಯಾನದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ 13ನೇ ಏಷ್ಯನ್ಮೆಕ್ಕೆಜೋಳ ಸಮ್ಮೇಳನದಲ್ಲಿ ಈ ವಿಷಯವನ್ನೇ ಚರ್ಚಿಸಲಾಗಿದೆ.</p>.<p><strong>ನಿಯಂತ್ರಣಕ್ಕೆ ಕಾರ್ಯಾಗಾರ</strong></p>.<p>ಮೈಸೂರಿನ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರವು ‘ಫಾಲ್ ಆರ್ಮಿ ವರ್ಮ್‘ ಹುಳುಗಳ ಹತೋಟಿ ಕುರಿತು ಈಚೆಗೆ ವಿಜ್ಞಾನಿಗಳ ಜತೆ ರೈತರ ಸಂವಾದ ಕಾರ್ಯಾಗಾರವನ್ನು ಏರ್ಪಡಿಸಿತ್ತು. ನಿಯಂತ್ರಣಕ್ಕೆ ಸಾವಯವ ವಿಧಾನಗಳನ್ನು ರೈತರಿಗೆ ಪರಿಚಯಿಸಲಾಯಿತು.</p>.<p>‘ಇದೊಂದು ಹೊಸ ಬಗೆಯ ಕೀಟ. ಬಾತುಕೋಳಿಗಳನ್ನು ಬಿಟ್ಟರೆ ಇಂತಹ ಹುಳುಗಳನ್ನು ತಿನ್ನುತ್ತವೆ. ಹುಳುಗಳ ಬೆಳವಣಿಗೆಯ 1ನೇ ಮತ್ತು 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಿದರೆ ಹತೋಟಿ ಸಾಧ್ಯ’ ಎಂದು ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಸಿ.ಗೋವಿಂದರಾಜು ಹೇಳಿದರು.</p>.<p><strong>ರಾಜ್ಯದಲ್ಲಿ ಬಿತ್ತನೆ ಪ್ರಮಾಣ (ಹೆಕ್ಟೇರ್)</strong></p>.<p>ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.</p>.<p><strong>ರಾಜ್ಯದಲ್ಲಿ ಮೆಕ್ಕೆಜೋಳ ಬಿತ್ತನೆ ಪ್ರಮಾಣ (ಹೆಕ್ಟೇರ್)</strong></p>.<p>ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.</p>.<p>* ರೈತರು ಒಟ್ಟಾಗಿ ಕೀಟನಾಶಕ ಸಿಂಪಡಿಸಿದರೆ ಹತೋಟಿಗೆ ತರಬಹುದು. ಮುಂದಿನ ವರ್ಷ ಹುಳುಗಳ ಬೆಳವಣಿಯ 1ನೇ, 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಬೇಕು</p>.<p><em>-ಡಾ.ಸಿ.ಗೋವಿಂದರಾಜು, ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕ. ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಘಟಕ, ಮೈಸೂರು</em></p>.<p>* ಮೈಸೂರು ಜಿಲ್ಲೆಯಲ್ಲಿ ಸೈನಿಕ ಹುಳು ಕಾಟ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗಗಳಲ್ಲಿ ಅರಿವು ಮೂಡಿಸಲಾಗಿದೆ</p>.<p><em>-ಮಹಾಂತಪ್ಪ, ಜಂಟಿ ಕೃಷಿ ನಿರ್ದೇಶಕ, ಮೈಸೂರು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>