<p><em><strong>ನವದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್ಯುನಲ್ಲಿ ಭಾನುವಾರನಡೆದ ದಾಂದಲೆಗೆ ವಿವಿಧ ಕ್ಷೇತ್ರದ ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.</strong></em></p>.<p>ನೀವು ಯಾವ ರಾಜಕೀಯ ಪಕ್ಷದವರು, ಯಾವ ಸಿದ್ಧಾಂತದವರು ಎಂಬುದು ಮುಖ್ಯವಲ್ಲ. ನಿಮ್ಮ ಧರ್ಮ ಯಾವುದು ಎಂಬುದೂ ಮುಖ್ಯವಲ್ಲ. ನೀವು ಭಾರತೀಯರಾಗಿದ್ದರೆ ಶಸ್ತ್ರಸಜ್ಜಿತ ಗೂಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ</p>.<p><strong>–ಆನಂದ್ ಮಹೀಂದ್ರಾ, <span class="Designate">ಉದ್ಯಮಿ</span></strong></p>.<p>ನಾನೇನು ಕಂಡೆನೋ ಅದು ಆಘಾತಕರ. ನನ್ನ ಮನ ಕಲಕಿದೆ. ರಾತ್ರಿ ನಿದ್ದೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಇದನ್ನು ಯಾರು ಮಾಡಿದ್ದಾರೆಯೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು</p>.<p><strong>–ಅನಿಲ್ ಕಪೂರ್, <span class="Designate">ಬಾಲಿವುಡ್ ನಟ</span></strong></p>.<p>ಸತ್ಯಕ್ಕೆ ಕಣ್ಣು ಕೊಟ್ಟು ನೋಡಬೇಕು. ನಮ್ಮೊಂದಿಗೇ ನಾವು ಸಂಘರ್ಷಕ್ಕೆ ಇಳಿದಿದ್ದೇವೆ. ಸಿದ್ಧಾಂತಗಳಲ್ಲಿ ಎಷ್ಟೇ ವ್ಯತ್ಯಾಸ ಇದ್ದರೂ ನಾವು ಒಂದು ದೇಶದ ಪ್ರಜೆಗಳು. ನಮ್ಮ ಸಮಸ್ಯೆಗಳಿಗೆ ಮಾನವೀಯವಾದ ಪರಿಹಾರ ಕಂಡುಕೊಳ್ಳಬೇಕು. ಈ ದೇಶ ನಿರ್ಮಾಣವಾದ ಶಾಂತಿ ಮತ್ತು ಎಲ್ಲರ ಒಳಗೊಳ್ಳುವಿಕೆಯ ಸಿದ್ಧಾಂತಗಳನ್ನು ಮರುಸ್ಥಾಪಿಸಬೇಕು</p>.<p><strong>–ಆಲಿಯಾ ಭಟ್, <span class="Designate">ಬಾಲಿವುಡ್ ನಟಿ</span></strong></p>.<p>ಭಾರತದ ಯುವಜನ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರತಿದಿನವೂ ದಮನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನೊಂದಿಗೆ, ಗೂಂಡಾಗಳನ್ನು ಬಳಸಿ ಯುವಜನರ ಮೇಲೆ ನಡೆಯುತ್ತಿರುವ ಹಿಂದೆಂದೂ ಕಂಡರಿಯದ ಹಿಂಸೆಯು ಖಂಡನೀಯ</p>.<p><strong>–ಸೋನಿಯಾ ಗಾಂಧಿ, <span class="Designate">ಕಾಂಗ್ರೆಸ್ ಅಧ್ಯಕ್ಷೆ</span></strong></p>.<p>ಜೆಎನ್ಯು ವಿದ್ಯಾರ್ಥಿಗಳ ಮೇಲಿನ ದಾಳಿಯು ಮುಂಬೈ ಮೇಲಿನ 26/11ರ ದಾಳಿಯನ್ನು ನೆನಪಿಸುತ್ತಿದೆ. ಜೆಎನ್ಯುನಲ್ಲಿ ನಡೆದಂತಹುದು ಮಹಾರಾಷ್ಟ್ರ<br />ದಲ್ಲಿ ನಡೆಯಲು ಅವಕಾಶ ಕೊಡುವುದಿಲ್ಲ. ದೇಶವು ಸುರಕ್ಷಿತವಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದೆ</p>.<p><strong>–ಉದ್ಧವ್ ಠಾಕ್ರೆ, <span class="Designate">ಮಹಾರಾಷ್ಟ್ರ ಮುಖ್ಯಮಂತ್ರಿ</span></strong></p>.<p>ಇಂತಹ ಘಟನೆಗಳ ವರದಿಗಾರಿಕೆ ಮತ್ತು ಅವುಗಳನ್ನು ಭಾವುಕಗೊಳಿಸುವಲ್ಲಿ ಮಾಧ್ಯಮವೂ ಸೇರಿ ಎಲ್ಲರೂ ಸಂಯಮ ತೋರಬೇಕಾದ ಸಮಯ ಇದು ಎಂದು ನನ್ನ ಅಭಿಪ್ರಾಯ. ಜೆಎನ್ಯು ಘಟನೆ ದುರದೃಷ್ಟಕರ</p>.<p><strong>–ಪೀಯೂಷ್ ಗೋಯಲ್, <span class="Designate">ಕೇಂದ್ರ ಸಚಿವ</span></strong></p>.<p>ಶಿಕ್ಷಣ ಸಂಸ್ಥೆಗಳು ರಾಜಕಾರಣದ ಯುದ್ಧಭೂಮಿಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ಈಗ ಅದನ್ನೇ ಪುನರುಚ್ಚರಿಸುತ್ತೇನೆ. ಹಾಗಾದರೆ, ಅದು ವಿದ್ಯಾರ್ಥಿಗಳ ಜೀವನ ಮತ್ತು ಪ್ರಗತಿಗೆ ಮಾರಕ. ರಾಜಕೀಯ ದಾಳವಾಗಿ ವಿದ್ಯಾರ್ಥಿಗಳ ಬಳಕೆ ಆಗದಿರಲಿ ಎಂದು ಹಾರೈಸುತ್ತೇನೆ</p>.<p><strong>–ಸ್ಮೃತಿ ಇರಾನಿ, <span class="Designate">ಸಚಿವೆ</span></strong></p>.<p>ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ರಾಜಕೀಯ ಅಡ್ಡೆಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ವಿ.ವಿ.ಗಳು ದೇಶದ ಭವಿಷ್ಯವನ್ನು ರೂಪಿಸುವ ಕಲಿಕಾ ಕೇಂದ್ರಗಳು. ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು</p>.<p><strong>–ರಮೇಶ್ ಪೋಖ್ರಿಯಾಲ್ ನಿಶಾಂಕ್, <span class="Designate">ಮಾನವ ಸಂಪನ್ಮೂಲ ಸಚಿವ</span></strong></p>.<p>ಒಂದೆಡೆ ಅವರು (ಬಿಜೆಪಿ) ಗೂಂಡಾಗಳನ್ನು ಕಳುಹಿಸಿದ್ದಾರೆ. ಮತ್ತೊಂದೆಡೆ, ಸುಮ್ಮನಿರುವಂತೆ ಪೊಲೀಸರಿಗೆ ಹೇಳಿದ್ದಾರೆ. ತಮ್ಮ ಮೇಲಿನವರು ಸುಮ್ಮನಿರಿ ಎಂದ ಮೇಲೆ ಪೊಲೀಸರು ಏನು ಮಾಡಲು ಸಾಧ್ಯ</p>.<p><strong>–ಮಮತಾ ಬ್ಯಾನರ್ಜಿ,<span class="Designate"> ಪಶ್ಚಿಮ ಬಂಗಾಳ ಮುಖ್ಯಮಂತ್ರಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ನವದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್ಯುನಲ್ಲಿ ಭಾನುವಾರನಡೆದ ದಾಂದಲೆಗೆ ವಿವಿಧ ಕ್ಷೇತ್ರದ ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.</strong></em></p>.<p>ನೀವು ಯಾವ ರಾಜಕೀಯ ಪಕ್ಷದವರು, ಯಾವ ಸಿದ್ಧಾಂತದವರು ಎಂಬುದು ಮುಖ್ಯವಲ್ಲ. ನಿಮ್ಮ ಧರ್ಮ ಯಾವುದು ಎಂಬುದೂ ಮುಖ್ಯವಲ್ಲ. ನೀವು ಭಾರತೀಯರಾಗಿದ್ದರೆ ಶಸ್ತ್ರಸಜ್ಜಿತ ಗೂಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ</p>.<p><strong>–ಆನಂದ್ ಮಹೀಂದ್ರಾ, <span class="Designate">ಉದ್ಯಮಿ</span></strong></p>.<p>ನಾನೇನು ಕಂಡೆನೋ ಅದು ಆಘಾತಕರ. ನನ್ನ ಮನ ಕಲಕಿದೆ. ರಾತ್ರಿ ನಿದ್ದೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಇದನ್ನು ಯಾರು ಮಾಡಿದ್ದಾರೆಯೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು</p>.<p><strong>–ಅನಿಲ್ ಕಪೂರ್, <span class="Designate">ಬಾಲಿವುಡ್ ನಟ</span></strong></p>.<p>ಸತ್ಯಕ್ಕೆ ಕಣ್ಣು ಕೊಟ್ಟು ನೋಡಬೇಕು. ನಮ್ಮೊಂದಿಗೇ ನಾವು ಸಂಘರ್ಷಕ್ಕೆ ಇಳಿದಿದ್ದೇವೆ. ಸಿದ್ಧಾಂತಗಳಲ್ಲಿ ಎಷ್ಟೇ ವ್ಯತ್ಯಾಸ ಇದ್ದರೂ ನಾವು ಒಂದು ದೇಶದ ಪ್ರಜೆಗಳು. ನಮ್ಮ ಸಮಸ್ಯೆಗಳಿಗೆ ಮಾನವೀಯವಾದ ಪರಿಹಾರ ಕಂಡುಕೊಳ್ಳಬೇಕು. ಈ ದೇಶ ನಿರ್ಮಾಣವಾದ ಶಾಂತಿ ಮತ್ತು ಎಲ್ಲರ ಒಳಗೊಳ್ಳುವಿಕೆಯ ಸಿದ್ಧಾಂತಗಳನ್ನು ಮರುಸ್ಥಾಪಿಸಬೇಕು</p>.<p><strong>–ಆಲಿಯಾ ಭಟ್, <span class="Designate">ಬಾಲಿವುಡ್ ನಟಿ</span></strong></p>.<p>ಭಾರತದ ಯುವಜನ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರತಿದಿನವೂ ದಮನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನೊಂದಿಗೆ, ಗೂಂಡಾಗಳನ್ನು ಬಳಸಿ ಯುವಜನರ ಮೇಲೆ ನಡೆಯುತ್ತಿರುವ ಹಿಂದೆಂದೂ ಕಂಡರಿಯದ ಹಿಂಸೆಯು ಖಂಡನೀಯ</p>.<p><strong>–ಸೋನಿಯಾ ಗಾಂಧಿ, <span class="Designate">ಕಾಂಗ್ರೆಸ್ ಅಧ್ಯಕ್ಷೆ</span></strong></p>.<p>ಜೆಎನ್ಯು ವಿದ್ಯಾರ್ಥಿಗಳ ಮೇಲಿನ ದಾಳಿಯು ಮುಂಬೈ ಮೇಲಿನ 26/11ರ ದಾಳಿಯನ್ನು ನೆನಪಿಸುತ್ತಿದೆ. ಜೆಎನ್ಯುನಲ್ಲಿ ನಡೆದಂತಹುದು ಮಹಾರಾಷ್ಟ್ರ<br />ದಲ್ಲಿ ನಡೆಯಲು ಅವಕಾಶ ಕೊಡುವುದಿಲ್ಲ. ದೇಶವು ಸುರಕ್ಷಿತವಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದೆ</p>.<p><strong>–ಉದ್ಧವ್ ಠಾಕ್ರೆ, <span class="Designate">ಮಹಾರಾಷ್ಟ್ರ ಮುಖ್ಯಮಂತ್ರಿ</span></strong></p>.<p>ಇಂತಹ ಘಟನೆಗಳ ವರದಿಗಾರಿಕೆ ಮತ್ತು ಅವುಗಳನ್ನು ಭಾವುಕಗೊಳಿಸುವಲ್ಲಿ ಮಾಧ್ಯಮವೂ ಸೇರಿ ಎಲ್ಲರೂ ಸಂಯಮ ತೋರಬೇಕಾದ ಸಮಯ ಇದು ಎಂದು ನನ್ನ ಅಭಿಪ್ರಾಯ. ಜೆಎನ್ಯು ಘಟನೆ ದುರದೃಷ್ಟಕರ</p>.<p><strong>–ಪೀಯೂಷ್ ಗೋಯಲ್, <span class="Designate">ಕೇಂದ್ರ ಸಚಿವ</span></strong></p>.<p>ಶಿಕ್ಷಣ ಸಂಸ್ಥೆಗಳು ರಾಜಕಾರಣದ ಯುದ್ಧಭೂಮಿಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ಈಗ ಅದನ್ನೇ ಪುನರುಚ್ಚರಿಸುತ್ತೇನೆ. ಹಾಗಾದರೆ, ಅದು ವಿದ್ಯಾರ್ಥಿಗಳ ಜೀವನ ಮತ್ತು ಪ್ರಗತಿಗೆ ಮಾರಕ. ರಾಜಕೀಯ ದಾಳವಾಗಿ ವಿದ್ಯಾರ್ಥಿಗಳ ಬಳಕೆ ಆಗದಿರಲಿ ಎಂದು ಹಾರೈಸುತ್ತೇನೆ</p>.<p><strong>–ಸ್ಮೃತಿ ಇರಾನಿ, <span class="Designate">ಸಚಿವೆ</span></strong></p>.<p>ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ರಾಜಕೀಯ ಅಡ್ಡೆಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ವಿ.ವಿ.ಗಳು ದೇಶದ ಭವಿಷ್ಯವನ್ನು ರೂಪಿಸುವ ಕಲಿಕಾ ಕೇಂದ್ರಗಳು. ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು</p>.<p><strong>–ರಮೇಶ್ ಪೋಖ್ರಿಯಾಲ್ ನಿಶಾಂಕ್, <span class="Designate">ಮಾನವ ಸಂಪನ್ಮೂಲ ಸಚಿವ</span></strong></p>.<p>ಒಂದೆಡೆ ಅವರು (ಬಿಜೆಪಿ) ಗೂಂಡಾಗಳನ್ನು ಕಳುಹಿಸಿದ್ದಾರೆ. ಮತ್ತೊಂದೆಡೆ, ಸುಮ್ಮನಿರುವಂತೆ ಪೊಲೀಸರಿಗೆ ಹೇಳಿದ್ದಾರೆ. ತಮ್ಮ ಮೇಲಿನವರು ಸುಮ್ಮನಿರಿ ಎಂದ ಮೇಲೆ ಪೊಲೀಸರು ಏನು ಮಾಡಲು ಸಾಧ್ಯ</p>.<p><strong>–ಮಮತಾ ಬ್ಯಾನರ್ಜಿ,<span class="Designate"> ಪಶ್ಚಿಮ ಬಂಗಾಳ ಮುಖ್ಯಮಂತ್ರಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>