<p><strong>ದಾವಣಗೆರೆ:</strong> ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದರೂ ದಾವಣಗೆರೆ ತಾಲ್ಲೂಕಿನ ದಿಂಡದಹಳ್ಳಿಯಲ್ಲಿ ಇನ್ನೂ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ. ಮಹಿಳೆಯರು ಮುಟ್ಟಾದಾಗ ತಮ್ಮ ಕುಟುಂಬವನ್ನು ಬಿಟ್ಟು ಹೊರಗೆ ಇರಬೇಕು. ಈ ಗ್ರಾಮದಲ್ಲಿ ಅಂತಹವರಿಗೆಂದೇ ಪ್ರತ್ಯೇಕ ಚಿಕ್ಕ ಮನೆ ಇದೆ. ನಿತ್ಯ ಏಳೆಂಟು ಮಹಿಳೆಯರು ಅಲ್ಲಿ ಇರುತ್ತಾರೆ.</p>.<p>ಹೆರಿಗೆಯಾದಾಗ ಹಾಗೂ ಮುಟ್ಟಾದಾಗ ಗೊಲ್ಲ ಹೆಣ್ಣುಮಕ್ಕಳು ಐದು ದಿನ ಈ ಮನೆಯಲ್ಲಿ ಇರಬೇಕು ಎನ್ನುವುದು ನಂಬಿಕೆ. ವಿಪರ್ಯಾಸ ಎಂದರೆ, ವಿದ್ಯಾವಂತ ಯುವತಿಯರೂ ಈ ಪದ್ಧತಿಯನ್ನು ವಿರೋಧಿಸದೇ ಪಾಲನೆ ಮಾಡುತ್ತಿದ್ದಾರೆ.</p>.<p>ಈ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಸುಮಾರು 150 ಮನೆಗಳಿವೆ. ಸುಮಾರು 1,500 ಮಂದಿ ಇದ್ದಾರೆ. ಆ ಪೈಕಿ ಸುಮಾರು 500 ಮಹಿಳೆಯರು ಇದ್ದಾರೆ.</p>.<p>‘ಜಿಲ್ಲಾ ಪಂಚಾಯಿತಿ, ಮಹಿಳಾ ಆಯೋಗ, ವಿವಿಧ ಸಂಘ ಸಂಸ್ಥೆಗಳು ಅನಿಷ್ಟ ಪದ್ಧತಿಗಳನ್ನು ತೊರೆಯುವಂತೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮದ ಸಮುದಾಯದ ಮುಖಂಡ ಬಸವರಾಜಪ್ಪ.</p>.<p>‘ದೊಡ್ಡವರೇ ಮಾಡುತ್ತಿದ್ದಾರೆ ಎಂದು ವಿದ್ಯಾವಂತ ಯುವತಿಯರೂ ಅದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p><strong>ಒಂದೇ ದಿನಕ್ಕೆ ಸೀಮಿತ:</strong> ಜಿಲ್ಲಾಡಳಿತ ಒಮ್ಮೆ ಈ ಗ್ರಾಮಕ್ಕೆ ಭೇಟಿ ನೀಡಿ ಇಂತಹ ಪದ್ಧತಿಗಳನ್ನು ಪಾಲನೆ ಮಾಡಬಾರದು ಎಂದು ತಿಳಿಹೇಳಿತ್ತು. ಆ ದಿನ ಮಾತ್ರ ಸಮುದಾಯದವರು ಹೇಳಿದ ಮಾತನ್ನು ಕೇಳಿದಂತೆ ವರ್ತಿಸಿದ್ದರು. ಮರುದಿನದಿಂದ ಮತ್ತೆ ಅದೇ ಚಾಳಿ ಮುಂದುವರಿಸಿದರು.</p>.<p><strong>ಚಿಕ್ಕ ಮನೆ, ಬೆಳಕು ಮತ್ತು ಗಾಳಿ ಕೊರತೆ: </strong>‘ಮುಟ್ಟಾದ ಮಹಿಳೆಯರು ಇರುವ ಮನೆಯ ಸ್ಥಿತಿಯೂ ಚೆನ್ನಾಗಿಲ್ಲ. ಬೆಳಕು ಮತ್ತು ಗಾಳಿ ಸರಿಯಾಗಿ ಬರುವುದಿಲ್ಲ. ಅಲ್ಲದೇ ಮುಖ್ಯರಸ್ತೆಯ ಪಕ್ಕದಲ್ಲಿಯೇ ಸ್ನಾನದ ಕೊಠಡಿ ಇದೆ. ಮೂರು ಕಡೆಯಿಂದ ಐದಾರು ಅಡಿ ಎತ್ತರದ ಗೋಡೆ ಕಟ್ಟಲಾಗಿದೆ. ದಿನವಿಡೀ ಆ ಮನೆಯಲ್ಲಿಯೇ ಇರುತ್ತಾರೆ. ಇಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದ್ದರೂ ಅದೇ ಮನೆಯಲ್ಲಿ ಮಲಗುತ್ತಾರೆ’ ಎಂದರು ಗ್ರಾಮದ ಕೃಷ್ಣಪ್ಪ.</p>.<p>‘ಮೊದಲು ಬೇವಿನ ಮರದ ಕೆಳಗೆ ಇರುತ್ತಿದ್ದೆವು. ಏಳೆಂಟು ವರ್ಷಗಳ ಹಿಂದೆ ಈ ಮನೆ ಕಟ್ಟಿದ್ದಾರೆ. ಮುಟ್ಟಾದವರಿಗೆ ಅಗಸರ ಮಹಿಳೆ ಬಂದು ನೀರು ಹಾಕುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಮೊದಲು ಅಣ್ಣಾಪುರ ಗ್ರಾಮದಲ್ಲಿ ಇದ್ದ ಅಗಸರ ಮನೆಗೆ ಹೋಗಿ ನೀರು ಹಾಕಿಸಿಕೊಳ್ಳುತ್ತಿದ್ದೆವು’ ಎನ್ನುತ್ತಾರೆ ಇಲ್ಲಿನ ಹಿರಿಯ ಮಹಿಳೆಯರು.</p>.<p><strong>ದಲಿತರಿಗೆ ಮನೆಯೊಳಗೆ ಪ್ರವೇಶವಿಲ್ಲ:</strong> ‘ದಿಂಡದಹಳ್ಳಿಯ ಗೊಲ್ಲ ಸಮುದಾಯದವರ ಮನೆಗಳಿಗೆ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಅವರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆ’ ಎಂದು ಗ್ರಾಮದ ಯುವಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.</p>.<p><strong>ಹೆರಿಗೆಯಾದರೆ ಐದು ದಿನ ಹೊರಗೆ:</strong> ಕಾಡುಗೊಲ್ಲ ಸಮುದಾಯದಲ್ಲಿ ಇರುವ ಮತ್ತೊಂದು ಅನಿಷ್ಟ ಪದ್ಧತಿ ಇದು. ‘ಮೊದಲೆಲ್ಲಾ ಹೆರಿಗೆಯಾದ ನಂತರ ಈ ಮನೆಯಲ್ಲಿ ಇರುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಆಗುತ್ತಿರುವುದರಿಂದ 3–4 ದಿನ ಅಲ್ಲಿಯೇ ಇರುತ್ತಾರೆ. ಐದನೇ ದಿನ ಈ ಮನೆಗೆ ಬಂದು ಅಗಸರ ಮಹಿಳೆ ನೀರು ಹಾಕಿದ ನಂತರ ಮೈಲಿಗೆ ಹೋಗುತ್ತದೆ ಎಂಬ ನಂಬಿಕೆ ಈಗಲೂ ಅವರಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದರೂ ದಾವಣಗೆರೆ ತಾಲ್ಲೂಕಿನ ದಿಂಡದಹಳ್ಳಿಯಲ್ಲಿ ಇನ್ನೂ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ. ಮಹಿಳೆಯರು ಮುಟ್ಟಾದಾಗ ತಮ್ಮ ಕುಟುಂಬವನ್ನು ಬಿಟ್ಟು ಹೊರಗೆ ಇರಬೇಕು. ಈ ಗ್ರಾಮದಲ್ಲಿ ಅಂತಹವರಿಗೆಂದೇ ಪ್ರತ್ಯೇಕ ಚಿಕ್ಕ ಮನೆ ಇದೆ. ನಿತ್ಯ ಏಳೆಂಟು ಮಹಿಳೆಯರು ಅಲ್ಲಿ ಇರುತ್ತಾರೆ.</p>.<p>ಹೆರಿಗೆಯಾದಾಗ ಹಾಗೂ ಮುಟ್ಟಾದಾಗ ಗೊಲ್ಲ ಹೆಣ್ಣುಮಕ್ಕಳು ಐದು ದಿನ ಈ ಮನೆಯಲ್ಲಿ ಇರಬೇಕು ಎನ್ನುವುದು ನಂಬಿಕೆ. ವಿಪರ್ಯಾಸ ಎಂದರೆ, ವಿದ್ಯಾವಂತ ಯುವತಿಯರೂ ಈ ಪದ್ಧತಿಯನ್ನು ವಿರೋಧಿಸದೇ ಪಾಲನೆ ಮಾಡುತ್ತಿದ್ದಾರೆ.</p>.<p>ಈ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಸುಮಾರು 150 ಮನೆಗಳಿವೆ. ಸುಮಾರು 1,500 ಮಂದಿ ಇದ್ದಾರೆ. ಆ ಪೈಕಿ ಸುಮಾರು 500 ಮಹಿಳೆಯರು ಇದ್ದಾರೆ.</p>.<p>‘ಜಿಲ್ಲಾ ಪಂಚಾಯಿತಿ, ಮಹಿಳಾ ಆಯೋಗ, ವಿವಿಧ ಸಂಘ ಸಂಸ್ಥೆಗಳು ಅನಿಷ್ಟ ಪದ್ಧತಿಗಳನ್ನು ತೊರೆಯುವಂತೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮದ ಸಮುದಾಯದ ಮುಖಂಡ ಬಸವರಾಜಪ್ಪ.</p>.<p>‘ದೊಡ್ಡವರೇ ಮಾಡುತ್ತಿದ್ದಾರೆ ಎಂದು ವಿದ್ಯಾವಂತ ಯುವತಿಯರೂ ಅದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p><strong>ಒಂದೇ ದಿನಕ್ಕೆ ಸೀಮಿತ:</strong> ಜಿಲ್ಲಾಡಳಿತ ಒಮ್ಮೆ ಈ ಗ್ರಾಮಕ್ಕೆ ಭೇಟಿ ನೀಡಿ ಇಂತಹ ಪದ್ಧತಿಗಳನ್ನು ಪಾಲನೆ ಮಾಡಬಾರದು ಎಂದು ತಿಳಿಹೇಳಿತ್ತು. ಆ ದಿನ ಮಾತ್ರ ಸಮುದಾಯದವರು ಹೇಳಿದ ಮಾತನ್ನು ಕೇಳಿದಂತೆ ವರ್ತಿಸಿದ್ದರು. ಮರುದಿನದಿಂದ ಮತ್ತೆ ಅದೇ ಚಾಳಿ ಮುಂದುವರಿಸಿದರು.</p>.<p><strong>ಚಿಕ್ಕ ಮನೆ, ಬೆಳಕು ಮತ್ತು ಗಾಳಿ ಕೊರತೆ: </strong>‘ಮುಟ್ಟಾದ ಮಹಿಳೆಯರು ಇರುವ ಮನೆಯ ಸ್ಥಿತಿಯೂ ಚೆನ್ನಾಗಿಲ್ಲ. ಬೆಳಕು ಮತ್ತು ಗಾಳಿ ಸರಿಯಾಗಿ ಬರುವುದಿಲ್ಲ. ಅಲ್ಲದೇ ಮುಖ್ಯರಸ್ತೆಯ ಪಕ್ಕದಲ್ಲಿಯೇ ಸ್ನಾನದ ಕೊಠಡಿ ಇದೆ. ಮೂರು ಕಡೆಯಿಂದ ಐದಾರು ಅಡಿ ಎತ್ತರದ ಗೋಡೆ ಕಟ್ಟಲಾಗಿದೆ. ದಿನವಿಡೀ ಆ ಮನೆಯಲ್ಲಿಯೇ ಇರುತ್ತಾರೆ. ಇಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದ್ದರೂ ಅದೇ ಮನೆಯಲ್ಲಿ ಮಲಗುತ್ತಾರೆ’ ಎಂದರು ಗ್ರಾಮದ ಕೃಷ್ಣಪ್ಪ.</p>.<p>‘ಮೊದಲು ಬೇವಿನ ಮರದ ಕೆಳಗೆ ಇರುತ್ತಿದ್ದೆವು. ಏಳೆಂಟು ವರ್ಷಗಳ ಹಿಂದೆ ಈ ಮನೆ ಕಟ್ಟಿದ್ದಾರೆ. ಮುಟ್ಟಾದವರಿಗೆ ಅಗಸರ ಮಹಿಳೆ ಬಂದು ನೀರು ಹಾಕುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಮೊದಲು ಅಣ್ಣಾಪುರ ಗ್ರಾಮದಲ್ಲಿ ಇದ್ದ ಅಗಸರ ಮನೆಗೆ ಹೋಗಿ ನೀರು ಹಾಕಿಸಿಕೊಳ್ಳುತ್ತಿದ್ದೆವು’ ಎನ್ನುತ್ತಾರೆ ಇಲ್ಲಿನ ಹಿರಿಯ ಮಹಿಳೆಯರು.</p>.<p><strong>ದಲಿತರಿಗೆ ಮನೆಯೊಳಗೆ ಪ್ರವೇಶವಿಲ್ಲ:</strong> ‘ದಿಂಡದಹಳ್ಳಿಯ ಗೊಲ್ಲ ಸಮುದಾಯದವರ ಮನೆಗಳಿಗೆ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಅವರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆ’ ಎಂದು ಗ್ರಾಮದ ಯುವಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.</p>.<p><strong>ಹೆರಿಗೆಯಾದರೆ ಐದು ದಿನ ಹೊರಗೆ:</strong> ಕಾಡುಗೊಲ್ಲ ಸಮುದಾಯದಲ್ಲಿ ಇರುವ ಮತ್ತೊಂದು ಅನಿಷ್ಟ ಪದ್ಧತಿ ಇದು. ‘ಮೊದಲೆಲ್ಲಾ ಹೆರಿಗೆಯಾದ ನಂತರ ಈ ಮನೆಯಲ್ಲಿ ಇರುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಆಗುತ್ತಿರುವುದರಿಂದ 3–4 ದಿನ ಅಲ್ಲಿಯೇ ಇರುತ್ತಾರೆ. ಐದನೇ ದಿನ ಈ ಮನೆಗೆ ಬಂದು ಅಗಸರ ಮಹಿಳೆ ನೀರು ಹಾಕಿದ ನಂತರ ಮೈಲಿಗೆ ಹೋಗುತ್ತದೆ ಎಂಬ ನಂಬಿಕೆ ಈಗಲೂ ಅವರಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>