ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ‘ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನವಿದೆ. ಮಂತ್ರಿ ಸ್ಥಾನಕ್ಕೆ ಎಲ್ಲರೂ ಲಾಬಿ ಮಾಡುವುದು ಸಹಜ. ಹಾಗೆಯೇ ಯಾವುದೂ ಸಿಗುವುದಿಲ್ಲ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ತೊಂದರೆ ಆಗಲಿದೆ; ಮುಖ್ಯಮಂತ್ರಿ ಅವರನ್ನು ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಎಂಬುದೆಲ್ಲವೂ ಸುಳ್ಳು’ ಎಂದು ರಂಜನ್ ಪ್ರತಿಕ್ರಿಯಿಸಿದರು.