ರಾಮಲಿಂಗಾ ರೆಡ್ಡಿ ಮನಸ್ಸು ಬದಲಿಸಿದರೆ, ಬೆಂಗಳೂರಿನ ಇತರ ಅತೃಪ್ತ ಶಾಸಕರ ನಿಲುವು ಸಹ ಬದಲಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಹೀಗಾಗಿ ಅವರ ಮನವೊಲಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಳೆಯ ತಪ್ಪನ್ನೆಲ್ಲ ಮನ್ನಿಸಿ, ಮುಂದೆ ಅವರಿಗೆ ಏನು ಬೇಕೋ ಅದೆಲ್ಲವನ್ನೂ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೂ ಅವರು ಇನ್ನೂ ತಮ್ಮ ಮನದಾಳದ ಮಾತನ್ನು ಆಡಿಲ್ಲ. ನಿರ್ಧಾರ ಪ್ರಕಟಿಸಿಲ್ಲ.