‘ಮಠಾಧೀಶರು ತಂಗಲು ದೇವಸ್ಥಾನದಲ್ಲಿ ಮೀಸಲಾಗಿದ್ದ ಕೊಠಡಿಯನ್ನು ಧ್ವಂಸ ಮಾಡಲಾಗಿದೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಟ್ರಸ್ಟ್ ಕಿತ್ತೂರು ಕುಟುಂಬದ ಹಿಡಿತದಲ್ಲಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೂಡಿದ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇದ್ದು, ನ್ಯಾಯಾಲಯದ ಆದೇಶಕ್ಕೆ ಮಠ ಬದ್ಧವಾಗಿರುತ್ತದೆ’ ಎಂದು ಹೇಳಿದರು.