ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಪ್ಪ ರೈ ಸಾವು ಬೆನ್ನಲ್ಲೆ ಸುದ್ದಿಯಾದ ಜಯರಾಜ್ ಪುತ್ರನ ಪೋಸ್ಟ್

Last Updated 15 ಮೇ 2020, 15:20 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ, ಡಾನ್ ಜಯರಾಜ್‌ನ ಮಗ ಅಜಿತ್ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟೊಂದನ್ನು ಪ್ರಕಟಿಸಿದ್ದಾರೆ.

ಡಾನ್ ಜಯರಾಜ್ ಪುತ್ರರಾಗಿರುವ ಅಜಿತ್'Sometimes the king has to remain the fools y he is king" ಎಂದು ಬರೆದು ಲವ್ ಯೂ ಅಪ್ಪ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ನಾನಾ ರೀತಿಯ ಕಮೆಂಟ್‌‌ಗಳನ್ನು ಹಾಕಲಾಗಿದೆ.

ಮುತ್ತಪ್ಪರೈ ಸಾವಿನ ಹಿಂದಿನ ದಿನತಮ್ಮ ತಂದೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಕಮೆಂಟ್ ಗಳನ್ನು ನೋಡಲಾಗದೆ ಕೆಲ ಸಮಯ ಮೂರ್ಖರಿಗೆ ರಾಜ ತಾನು ರಾಜ ಯಾಕೆಎಂಬುದನ್ನು ನೆನಪಿಸಬೇಕಾಗುತ್ತೆ ಎಂಬ ಅರ್ಥ ಬರುವ ವಾಕ್ಯವನ್ನು ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಜಿತ್ ಜಯರಾಜ್, ನಾನು ಜಯರಾಜ್ ಪುತ್ರ ಎನಿಸಿಕೊಳ್ಳುವುದಕ್ಕಿಂತ ನನ್ನಲ್ಲಿರುವ ಪ್ರತಿಭೆಯಿಂದ ಮೇಲೆ ಬರಬೇಕು. ಹಲವರು ನನ್ನನ್ನು ನಮ್ಮ ತಂದೆಯಂತೆಯೇ ಬೆಳೆಯಬೇಕೆಂದರು. ಆದರೆ, ಡಾನ್ ಮಗ ಡಾನ್ ಆಗುವುದು ಬೇಡ ಎಂದು ಆಕ್ಟರ್ ಆಗಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT