ಮೊದಲ ಹಂತದಲ್ಲಿ ಬಳ್ಳೆ ಶಿಬಿರದ ಅರ್ಜುನ (58), ದುಬಾರೆ ಶಿಬಿರದ ಧನಂಜಯ (35), ಆನೆಕಾಡು ಶಿಬಿರದ ಗೋಪಿ (36), ವಿಕ್ರಮ (45), ಮತ್ತಿಗೋಡು ಶಿಬಿರದ ವರಲಕ್ಷ್ಮಿ (62) ಅರಮನೆ ನಗರಿಯತ್ತ ಹೊರಟವು. ಚೈತ್ರಾ (47) ಆನೆ ಬಂಡೀಪುರ ಶಿಬಿರದಿಂದ ಬರಲಿದೆ. ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರು ಗಂಟುಮೂಟೆ ಕಟ್ಟಿಕೊಂಡು ಲಾರಿ ಏರಿದರು.