ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್ನಲ್ಲಿ ಆಗಸ್ಟ್ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.
ನಾಲ್ಕು ತಿಂಗಳ ವಿವರಗಳು ಇಲ್ಲದ ಕ್ಯಾಲೆಂಡರ್ಗಳನ್ನೇ ಭಕ್ತರು ಹಾಗೂ ಸ್ಥಳೀಯರಿಗೆ ಪ್ರಾಧಿಕಾರವು ₹ 20ಕ್ಕೆ ಮಾರಾಟ ಮಾಡುತ್ತಿದೆ.
ಪ್ರಾಧಿಕಾರವು ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸಿ ಮಾರಾಟ ಮಾಡುತ್ತದೆ. ದೇವಾಲಯದಲ್ಲಿ ನಡೆಯುವ ಉತ್ಸವಗಳು, ಪೂಜಾ ಸಮಯ, ವಿವಿಧ ಸೇವೆಗಳ ವಿವರಗಳು ಇದರಲ್ಲಿ ಇವೆ. ಹೀಗಾಗಿ, ತಪ್ಪನ್ನು ಸರಿಪಡಿಸಿ ಹೊಸದಾಗಿ ಕ್ಯಾಲೆಂಡರ್ ವಿತರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
** ಇದು ಮುದ್ರಣದೋಷದ ಪ್ರಮಾದ. ಮುಂದೆ ಮುದ್ರಣಗೊಳ್ಳಲಿರುವ ಕ್ಯಾಲೆಂಡರ್ಗಳಲ್ಲಿ ಈ ಸಮಸ್ಯೆ ಆಗದು. ದೋಷಪೂರಿತ ಕ್ಯಾಲೆಂಡರ್ ಖರೀದಿಸಿದವರಿಗೆ ಹೊಸ ಕ್ಯಾಲೆಂಡರ್ ವಿತರಿಸಲಾಗುವುದು - ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ