<p><strong>ಬೆಂಗಳೂರು:</strong> ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಲೇಬೇಕಾದ ಪಾಲಿನಲ್ಲಿ ಕಡಿತ ಮಾಡಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪತ್ರ ಬರೆದಿದೆ.</p>.<p>‘ಯಾವ ಬಾಬ್ತಿನಿಂದ ಎಷ್ಟು ಪ್ರಮಾಣದಲ್ಲಿ ಕಡಿತವಾಗಲಿದೆ ಎಂದು ವಿವರಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವಾಗ ರಾಜ್ಯದ ಪಾಲನ್ನು ನೀಡುವಂತೆ ಪತ್ರದಲ್ಲಿ ಕೋರಿರುವುದು ಹೌದು. ಇದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಡಿರುವ ಮನವಿಯಷ್ಟೆ’ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದ್ದರೂ ಉತ್ತರದ ರಾಜ್ಯಗಳಿಗೆ ಸಿಕ್ಕಿರುವ ಅನುದಾನಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಅದನ್ನು ರಾಜ್ಯ ಸರ್ಕಾರ ಕೂಡ ಈಗ ಪ್ರಸ್ತಾಪಿಸಿದಂತಾಗಿದೆ.</p>.<p><strong>₹17 ಸಾವಿರ ಕೋಟಿ ಬಾಕಿ:</strong> ‘2019–20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ ₹17 ಸಾವಿರ ಕೋಟಿ ಕೊರತೆ<br />ಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ ₹8,813 ಕೋಟಿ ಕೈತಪ್ಪುವುದು ಖಚಿತ. ಜಿಎಸ್ಟಿ ಪಾಲಿನಲ್ಲಿ ಕೊನೆಯ ಕಂತು ಅಂದಾಜು<br />₹4 ಸಾವಿರ ಕೋಟಿ ಬರುವುದು ಅನುಮಾನ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಜಿಎಸ್ಟಿ ಪರಿಹಾರ ರೂಪದಲ್ಲಿ ₹5 ಸಾವಿರ ಕೋಟಿ ಬಾಕಿ ಇದ್ದು, ಆ ಪೈಕಿ ₹3 ಸಾವಿರ ಕೋಟಿ ಬರುವ ಸಾಧ್ಯತೆ ಕಡಿಮೆ’ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.</p>.<p>‘15 ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಅನುದಾನ ಹಂಚಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ದೊಡ್ಡ ಪ್ರಮಾಣದ ನಷ್ಟ ಆಗಲಿದೆ. ಕೇಂದ್ರ ಬಜೆಟ್ನ ಅಂದಾಜಿನಂತೆ ₹5,102 ಕೋಟಿ ಕೊರತೆಯಾಗಲಿದೆ. ಕೇಂದ್ರ ಆರ್ಥಿಕ ಇಲಾಖೆಯ ದಾಖಲೆಗಳ ಅನುಸಾರ ಈ ಮೊತ್ತ ₹11,215 ಕೋಟಿಯಷ್ಟಾಗಲಿದೆ. ಇದರ ಜತೆಗೆ ಜಿಎಸ್ಟಿ ಪರಿಹಾರ ಮೊತ್ತದಲ್ಲಿ ಎಷ್ಟು ಕಡಿತವಾಗಲಿದೆ ಎಂಬುದು ಗೊತ್ತಿಲ್ಲ. ಬಜೆಟ್ ಮಂಡನೆ ಹೊತ್ತಿಗೆ ಈ ಲೆಕ್ಕಾಚಾರ ಪಕ್ಕಾ ಆಗಲಿದೆ. ಇದು ಹೊಸ ಯೋಜನೆಗಳ ಘೋಷಣೆಗೆ ಅಡ್ಡಿಯಾಗಿರುವುದಂತೂ ಸತ್ಯ’ ಎಂದು ಮೂಲಗಳು ವಿವರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಲೇಬೇಕಾದ ಪಾಲಿನಲ್ಲಿ ಕಡಿತ ಮಾಡಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪತ್ರ ಬರೆದಿದೆ.</p>.<p>‘ಯಾವ ಬಾಬ್ತಿನಿಂದ ಎಷ್ಟು ಪ್ರಮಾಣದಲ್ಲಿ ಕಡಿತವಾಗಲಿದೆ ಎಂದು ವಿವರಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವಾಗ ರಾಜ್ಯದ ಪಾಲನ್ನು ನೀಡುವಂತೆ ಪತ್ರದಲ್ಲಿ ಕೋರಿರುವುದು ಹೌದು. ಇದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಡಿರುವ ಮನವಿಯಷ್ಟೆ’ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದ್ದರೂ ಉತ್ತರದ ರಾಜ್ಯಗಳಿಗೆ ಸಿಕ್ಕಿರುವ ಅನುದಾನಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಅದನ್ನು ರಾಜ್ಯ ಸರ್ಕಾರ ಕೂಡ ಈಗ ಪ್ರಸ್ತಾಪಿಸಿದಂತಾಗಿದೆ.</p>.<p><strong>₹17 ಸಾವಿರ ಕೋಟಿ ಬಾಕಿ:</strong> ‘2019–20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ ₹17 ಸಾವಿರ ಕೋಟಿ ಕೊರತೆ<br />ಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ ₹8,813 ಕೋಟಿ ಕೈತಪ್ಪುವುದು ಖಚಿತ. ಜಿಎಸ್ಟಿ ಪಾಲಿನಲ್ಲಿ ಕೊನೆಯ ಕಂತು ಅಂದಾಜು<br />₹4 ಸಾವಿರ ಕೋಟಿ ಬರುವುದು ಅನುಮಾನ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಜಿಎಸ್ಟಿ ಪರಿಹಾರ ರೂಪದಲ್ಲಿ ₹5 ಸಾವಿರ ಕೋಟಿ ಬಾಕಿ ಇದ್ದು, ಆ ಪೈಕಿ ₹3 ಸಾವಿರ ಕೋಟಿ ಬರುವ ಸಾಧ್ಯತೆ ಕಡಿಮೆ’ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.</p>.<p>‘15 ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಅನುದಾನ ಹಂಚಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ದೊಡ್ಡ ಪ್ರಮಾಣದ ನಷ್ಟ ಆಗಲಿದೆ. ಕೇಂದ್ರ ಬಜೆಟ್ನ ಅಂದಾಜಿನಂತೆ ₹5,102 ಕೋಟಿ ಕೊರತೆಯಾಗಲಿದೆ. ಕೇಂದ್ರ ಆರ್ಥಿಕ ಇಲಾಖೆಯ ದಾಖಲೆಗಳ ಅನುಸಾರ ಈ ಮೊತ್ತ ₹11,215 ಕೋಟಿಯಷ್ಟಾಗಲಿದೆ. ಇದರ ಜತೆಗೆ ಜಿಎಸ್ಟಿ ಪರಿಹಾರ ಮೊತ್ತದಲ್ಲಿ ಎಷ್ಟು ಕಡಿತವಾಗಲಿದೆ ಎಂಬುದು ಗೊತ್ತಿಲ್ಲ. ಬಜೆಟ್ ಮಂಡನೆ ಹೊತ್ತಿಗೆ ಈ ಲೆಕ್ಕಾಚಾರ ಪಕ್ಕಾ ಆಗಲಿದೆ. ಇದು ಹೊಸ ಯೋಜನೆಗಳ ಘೋಷಣೆಗೆ ಅಡ್ಡಿಯಾಗಿರುವುದಂತೂ ಸತ್ಯ’ ಎಂದು ಮೂಲಗಳು ವಿವರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>