ಮಾಧ್ವ ಸಂಪ್ರದಾಯದಂತೆ ನಸುಕಿನಿಂದಲೇ ವಿರಾಜ ಹೋಮ ಸಹಿತ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು. ಚತುರ್ವಿಂಶತಿಆರಾಧನೆ ಹಾಗೂ 108 ವಿದ್ವಾಂಸರ ಪಾದಪೂಜೆ ನಡೆಯಿತು. ಹಲವು ವಿಶೇಷ ಪೂಜೆಗಳೂ ನಡೆದವು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ ಸಂಕೀರ್ತನೆ ನಡೆದರೆ, ಸಂಜೆ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.