ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ಕೆ.ಆರ್.ಪುರದಲ್ಲಿ ಕೋಳಿ, ಆಹಾರ ಕಿಟ್ ಪಡೆಯಲು ಮುಗಿಬಿದ್ದ ಜನರು

Last Updated 21 ಮೇ 2020, 8:19 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಕಾರಣ ಕೆ.ಆರ್.ಪುರ ಬಸವನಪುರ ವಾರ್ಡ್ನಲ್ಲಿ ದಿನಸಿ ಹಾಗೂ ಕೋಳಿಗಳ ಪಡೆಯಲು ಜನರು ಮುಗಿಬಿದ್ದರು.

ಗುರುವಾರ ಬೆಳಿಗ್ಗೆನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ತಮ್ಮ ಕ್ಷೇತ್ರದ ಜನರಿಗೆಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅಂತರಕಾಯ್ದುಕೊಳ್ಳದ ಜನರು ಕೋಳಿ ಹಾಗೂ ಆಹಾರ ಕಿಟ್ ಪಡೆಯಲು ಒಬ್ಬರ ಮೇಲೆ ಒಬ್ಬರು ಬೀಳುತ್ತಾ ನೂಕು ನುಗ್ಗಲಲ್ಲಿ ನಿಂತಿರುವುದು ಕಂಡು ಬಂತು.

ಎರಡು ತಿಂಗಳು ಮನೆಯಲ್ಲಿದ್ದ ಜನರು ಗುಂಪು ಗುಂಪಾಗಿ ಬರುತ್ತಿದ್ದುದು ಕಂಡು ಬಂತು. ಈ ಸಮಯದಲ್ಲಿ ಪೊಲೀಸರು ಹತ್ತಿರದಲ್ಲಿಯೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಕೋಳಿ ಹಾಗೂ ಆಹಾರ ಕಿಟ್ ನೀಡುವವರೂ ಸರಿಯಾದ ಸಾಲಿನಲ್ಲಿ ಜನರನ್ನು ನಿಲ್ಲಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT