ಆದರೆ, ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವೈದ್ಯಕೀಯ ಪರೀಕ್ಷೆಯ ಬಳಿಕ ತನಗೆ ಸೋಂಕು ಇಲ್ಲ ಎಂದು ಭಾವಿಸಿ ಆತ ಊರಿಗೆ ಮರಳಿದ್ದ. ಈ ಮಾಹಿತಿ ಪಡೆದ ಇಂದಿರಾಗನಗರ ಪೊಲೀಸರು ಅನಂತಪುರ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾತ್ರಿಯೇ ಪೊಲೀಸರ ತಂಡ ಅಲ್ಲಿಗೆ ತೆರಳಿ ಅವರನ್ನು ಮನವೊಲಿಸಿ ಕರೆದುಕೊಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.