ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದ ಪತ್ನಿ ಸೌಮ್ಯಾ, ಮಕ್ಕಳಾದ ಮೋಹಿತ್ ಹಾಗೂ ಶ್ರೇಯಾ ಅವರನ್ನೂ ಆರಂಭದಲ್ಲಿ ದೂರದಲ್ಲೇ ನಿಲ್ಲಿಸಲಾಗಿತ್ತು. ಅಲ್ಲಿಯೇ ಅವರು ಗೋಳಾಡಿ ಕಣ್ಣೀರಿಟ್ಟರು. ಸಂಬಂಧಿಕರು ಎಷ್ಟೇ ಸಮಾಧಾನಪಡಿಸಿದರೂ ದುಃಖ ಕಡಿಮೆ ಆಗಲಿಲ್ಲ. ಮಕ್ಕಳಂತೂ ‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’ ಎಂದು ಬಿಕ್ಕಿ ಬಿಕ್ಕಿ ಅತ್ತರು. ಅಲ್ಲಿ ಸೇರಿದ್ದ ಜನ ಆ ದೃಶ್ಯ ಕಂಡು ಕಣ್ಣೀರಿಟ್ಟರು.