ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆಯ ಕಾಮಗಾರಿಯು ಕೆಲವು ಕಡೆ ಮಂದಗತಿಯಿಂದ ನಡೆದಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ.
ಐಜೂರು ಪೊಲೀಸ್ ಠಾಣೆಯ ಮುಂಭಾಗ ರಸ್ತೆ ವಿಸ್ತರಣೆಗಾಗಿ ಅಗೆಯಲಾಗಿದ್ದು, ಸಾಕಷ್ಟು ದಿನಗಳಿಂದ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಸಂಪರ್ಕ ರಸ್ತೆಗಳಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆ ಆಗಿದ್ದು, ಅಪಘಾತಗಳೂ ಸಂಭವಿಸುತ್ತಿವೆ. ರಸ್ತೆಯಲ್ಲಿ ಕನಿಷ್ಠ ಎಚ್ಚರಿಕೆಯ ಫಲಕವನ್ನು ಹಾಕುವ ಕೆಲಸ ಆಗಿಲ್ಲ.
ನಿತ್ಯ ಪೊಲೀಸ್ ಠಾಣೆಯ ಎದುರೇ ಅಪಘಾತ ಸಂಭವಿಸುತ್ತಿದ್ದರೂಪೊಲೀಸರಿಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಸುಮಾರು ಅಡಿಗಳಷ್ಟು ಆಳಕ್ಕೆರಸ್ತೆಯನ್ನು ಅಗೆಯಲಾಗಿದ್ದು, ಸುತ್ತ ಮರಳಿನ ಮೂಟೆಗಳನ್ನು ಬಿಟ್ಟರೆ ಬೇರೇನೂ ವ್ಯವಸ್ಥೆ ಮಾಡಿಲ್ಲ. ಪಾದಚಾರಿ ಮಾರ್ಗವನ್ನೂ ಅಗೆಯಲಾಗಿದೆ.