ಶನಿವಾರ ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟವಾದ ‘ಸಚಿವರೇ, ದಮ್ಮಯ್ಯ ಇತ್ತ ನೋಡಿ’ ಎಂಬ ಸುದ್ದಿಗೆ ಕೂಡಲೇ ಸ್ಪಂದಿಸಿರುವ ಅವರು, ‘ಶಾಲೆಗಳ ಪುನರ್ನಿರ್ಮಾಣದ ಅತಂಕ ಯಾರಿಗೂ ಬೇಡ, 15 ಜಿಲ್ಲೆಗಳಲ್ಲಿ ₹ 199 ಕೋಟಿ ವೆಚ್ಚದಲ್ಲಿ 1,806 ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ, 4,271 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೂಲಕ ಒಟ್ಟು 6,077 ಶಾಲೆಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.