<p><strong>ಉಡುಪಿ: </strong>ಮಂಡ್ಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇರುವ ಕಾರಣ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಚಿಂತಕಿ ಕೆ.ನೀಲಾ ತಿಳಿಸಿದ್ದರು. ಬಳಿಕ, ಮೋಹನ್ ಆಳ್ವ ಅವರಂಥವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಗೈರಾಗುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾರೆ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯ ಅಂತಃಕರಣ ಇರುವ ವ್ಯಕ್ತಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವಿದೆ. ಅಹಂಕಾರ, ಹಮ್ಮು–ಬಿಮ್ಮುಗಳಿದ್ದರಿಗೆ ಸ್ವಾಗತವಿಲ್ಲ. ನೀಳಾ ಅವರದ್ದು ಆತ್ಮವಂಚನೆಯ ಕೆಲಸ ಎಂದು ಟೀಕಿಸಿದರು.</p>.<p>‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕರ ಹೆಸರನ್ನು ಮಾತ್ರ ಶ್ರೀಮಠ ಮುದ್ರಿಸುತ್ತದೆ. ಸ್ಥಳೀಯವಾಗಿ ಅಧ್ಯಕ್ಷತೆ ವಹಿಸುವವರನ್ನು ಆಯ್ಕೆಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ಕೊಡಲಾಗಿದೆ. ಆಚಾರ–ವಿಚಾರ ಶುದ್ಧವಿರುವ, ಬಸವತತ್ವದ ಪರ ಒಲವಿರುವ, ಜನರ ಪ್ರೀತಿ ಗಳಿಸಿದ ವ್ಯಕ್ತಿಯನ್ನು ಆಹ್ವಾನಿಸುವಂತೆ ಸೂಚನೆ ನೀಡಲಾಗಿರುತ್ತದೆ. ಅದರಂತೆ, ಸ್ಥಳೀಯ ಸಮಿತಿಯ ಆಯ್ಕೆ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ’ ಎಂದರು.</p>.<p>‘ನೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಲುವುಗಳನ್ನು ಮಂಡಿಸಿ ಪ್ರತಿಭಟಿಸಿದ್ದರೆ ಸ್ವಾಗತಿಸುತ್ತಿದ್ದೆ.ಕಸಬಿದ್ದ ಕಡೆ ಕಸ ಗುಡಿಸುವುದು ಪೊರಕೆಯ ಕೆಲಸ. ಅಲ್ಲಿ ಗುಡಿಸುವುದಿಲ್ಲ, ಇಲ್ಲಿ ಗುಡಿಸುವುದಿಲ್ಲ ಎಂದರೆ ಅದನ್ನು ಪೊರಕೆ ಎನ್ನುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಮಂಡ್ಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇರುವ ಕಾರಣ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಚಿಂತಕಿ ಕೆ.ನೀಲಾ ತಿಳಿಸಿದ್ದರು. ಬಳಿಕ, ಮೋಹನ್ ಆಳ್ವ ಅವರಂಥವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಗೈರಾಗುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾರೆ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯ ಅಂತಃಕರಣ ಇರುವ ವ್ಯಕ್ತಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವಿದೆ. ಅಹಂಕಾರ, ಹಮ್ಮು–ಬಿಮ್ಮುಗಳಿದ್ದರಿಗೆ ಸ್ವಾಗತವಿಲ್ಲ. ನೀಳಾ ಅವರದ್ದು ಆತ್ಮವಂಚನೆಯ ಕೆಲಸ ಎಂದು ಟೀಕಿಸಿದರು.</p>.<p>‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕರ ಹೆಸರನ್ನು ಮಾತ್ರ ಶ್ರೀಮಠ ಮುದ್ರಿಸುತ್ತದೆ. ಸ್ಥಳೀಯವಾಗಿ ಅಧ್ಯಕ್ಷತೆ ವಹಿಸುವವರನ್ನು ಆಯ್ಕೆಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ಕೊಡಲಾಗಿದೆ. ಆಚಾರ–ವಿಚಾರ ಶುದ್ಧವಿರುವ, ಬಸವತತ್ವದ ಪರ ಒಲವಿರುವ, ಜನರ ಪ್ರೀತಿ ಗಳಿಸಿದ ವ್ಯಕ್ತಿಯನ್ನು ಆಹ್ವಾನಿಸುವಂತೆ ಸೂಚನೆ ನೀಡಲಾಗಿರುತ್ತದೆ. ಅದರಂತೆ, ಸ್ಥಳೀಯ ಸಮಿತಿಯ ಆಯ್ಕೆ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ’ ಎಂದರು.</p>.<p>‘ನೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಲುವುಗಳನ್ನು ಮಂಡಿಸಿ ಪ್ರತಿಭಟಿಸಿದ್ದರೆ ಸ್ವಾಗತಿಸುತ್ತಿದ್ದೆ.ಕಸಬಿದ್ದ ಕಡೆ ಕಸ ಗುಡಿಸುವುದು ಪೊರಕೆಯ ಕೆಲಸ. ಅಲ್ಲಿ ಗುಡಿಸುವುದಿಲ್ಲ, ಇಲ್ಲಿ ಗುಡಿಸುವುದಿಲ್ಲ ಎಂದರೆ ಅದನ್ನು ಪೊರಕೆ ಎನ್ನುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>