‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕರ ಹೆಸರನ್ನು ಮಾತ್ರ ಶ್ರೀಮಠ ಮುದ್ರಿಸುತ್ತದೆ. ಸ್ಥಳೀಯವಾಗಿ ಅಧ್ಯಕ್ಷತೆ ವಹಿಸುವವರನ್ನು ಆಯ್ಕೆಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ಕೊಡಲಾಗಿದೆ. ಆಚಾರ–ವಿಚಾರ ಶುದ್ಧವಿರುವ, ಬಸವತತ್ವದ ಪರ ಒಲವಿರುವ, ಜನರ ಪ್ರೀತಿ ಗಳಿಸಿದ ವ್ಯಕ್ತಿಯನ್ನು ಆಹ್ವಾನಿಸುವಂತೆ ಸೂಚನೆ ನೀಡಲಾಗಿರುತ್ತದೆ. ಅದರಂತೆ, ಸ್ಥಳೀಯ ಸಮಿತಿಯ ಆಯ್ಕೆ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ’ ಎಂದರು.