<p><strong>ಹಾಸನ: </strong>ನಾಪತ್ತೆಯಾಗಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ತಿಳಿದು ಅಂತ್ಯಕ್ರಿಯೆ ನೆರವೇರಿಸಿ, 11ನೇ ದಿನದ ಆರಾಧನಾ ಕಾರ್ಯವನ್ನೂ ಮುಗಿಸಲಾಗಿತ್ತು. ಆದರೆ ಈಗ ಆ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿದ್ದಾನೆ.</p>.<p>ದುಃಖತಪ್ತರಾಗಿದ್ದ ವ್ಯಕ್ತಿಯ ಮನೆಯವರಲ್ಲಿ ಸಂತಸ ಮರಳಿ ಬಂದಿದ್ದರೆ, ಗ್ರಾಮಸ್ಥರು ಮತ್ತು ಸಂಬಂಧಿಕರಲ್ಲಿ ಅಚ್ಚರಿ ಮನೆ ಮಾಡಿದೆ. ಅಂತ್ಯಕ್ರಿಯೆ ನಡೆಸಿದ ವ್ಯಕ್ತಿ ಯಾರು ಎನ್ನುವ ಗೊಂದಲ ಶುರುವಾಗಿದೆ.</p>.<p>ತಾಲ್ಲೂಕಿನ ಶಂಖ ಗ್ರಾಮದ ನಿವಾಸಿ, ಕೃಷಿ ಕೆಲಸ ಮಾಡಿದ್ದ ಶಿವಣ್ಣ, 20 ದಿನಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಇದಾದ ನಂತರ ಆತಂಕಗೊಂಡ ಶಿವಣ್ಣನ ಪತ್ನಿ, ದೀಪಾ ಹಾಸನ ಗ್ರಾಮಾಂತರ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾಣೆಯಾಗಿದ್ದ ಶಿವಣ್ಣನ ಹೋಲಿಕೆಯನ್ನೇ ಮೃತದೇಹ ಹೋಲುತ್ತಿದ್ದುದರಿಂದ ಪೊಲೀಸರು, ದೀಪಾಳಿಗೆ ಕರೆ ಮಾಡಿ ಕರೆಸಿದರು.</p>.<p>ಮೃತದೇಹದ ಮೈಮೇಲಿದ್ದ ಉಡುಪು ನೋಡಿದ ದೀಪಾ, ‘ಇವರು ನನ್ನ ಪತಿಯಲ್ಲ’ ಎಂದಿದ್ದರು. ಆದರೆ ದೇಹದ ಮುಖಭಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದರು.</p>.<p>ಇದೆಲ್ಲಾ ಮುಗಿದ ನಂತರ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಕಾಣಿಸಿಕೊಂಡ ಶಿವಣ್ಣನನ್ನು ಊರಿಗೆ ಕರೆದುಕೊಂಡು ಬಂದಿದ್ದಾರೆ.</p>.<p>‘ನನ್ನ ಪತಿ ಸತ್ತಿಲ್ಲ ಎಂಬ ನಂಬಿಕೆ ಇತ್ತು. ಅಂದು ಪೊಲೀಸರಿಗೆ ಮೃತದೇಹ ಪತಿಯದಲ್ಲ ಎಂದು ಹೇಳಿದ್ದರೂ ಕೇಳಲಿಲ್ಲ. ಒಲ್ಲದ ಮನಸ್ಸಿನಿಂದಲೇ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಶಿವಣ್ಣನ ಪತ್ನಿ ದೀಪಾ ತಿಳಿಸಿದರು.</p>.<p>‘ಬೇಜಾರಾಗಿ ನಾಲ್ಕು ದಿನ ಹೊರಗೆ ಇದ್ದು ಬರೋಣ ಎಂದು ಮನೆ ಬಿಟ್ಟು ಹೋಗಿದ್ದೆ. ಮೊದಲು ತುಮಕೂರಲ್ಲಿ ಹೋಟೆಲ್ ಸೇರಿದೆ. ಅಲ್ಲಿ ವಾತಾವರಣ ಹಿಡಿಸದ ಕಾರಣ ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದೆ’ ಎಂದು ಬದುಕಿ ಬಂದ ಶಿವಣ್ಣ ಹೇಳಿದರು.</p>.<p>ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ಯಾರದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ನಾಪತ್ತೆಯಾಗಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ತಿಳಿದು ಅಂತ್ಯಕ್ರಿಯೆ ನೆರವೇರಿಸಿ, 11ನೇ ದಿನದ ಆರಾಧನಾ ಕಾರ್ಯವನ್ನೂ ಮುಗಿಸಲಾಗಿತ್ತು. ಆದರೆ ಈಗ ಆ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿದ್ದಾನೆ.</p>.<p>ದುಃಖತಪ್ತರಾಗಿದ್ದ ವ್ಯಕ್ತಿಯ ಮನೆಯವರಲ್ಲಿ ಸಂತಸ ಮರಳಿ ಬಂದಿದ್ದರೆ, ಗ್ರಾಮಸ್ಥರು ಮತ್ತು ಸಂಬಂಧಿಕರಲ್ಲಿ ಅಚ್ಚರಿ ಮನೆ ಮಾಡಿದೆ. ಅಂತ್ಯಕ್ರಿಯೆ ನಡೆಸಿದ ವ್ಯಕ್ತಿ ಯಾರು ಎನ್ನುವ ಗೊಂದಲ ಶುರುವಾಗಿದೆ.</p>.<p>ತಾಲ್ಲೂಕಿನ ಶಂಖ ಗ್ರಾಮದ ನಿವಾಸಿ, ಕೃಷಿ ಕೆಲಸ ಮಾಡಿದ್ದ ಶಿವಣ್ಣ, 20 ದಿನಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಇದಾದ ನಂತರ ಆತಂಕಗೊಂಡ ಶಿವಣ್ಣನ ಪತ್ನಿ, ದೀಪಾ ಹಾಸನ ಗ್ರಾಮಾಂತರ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾಣೆಯಾಗಿದ್ದ ಶಿವಣ್ಣನ ಹೋಲಿಕೆಯನ್ನೇ ಮೃತದೇಹ ಹೋಲುತ್ತಿದ್ದುದರಿಂದ ಪೊಲೀಸರು, ದೀಪಾಳಿಗೆ ಕರೆ ಮಾಡಿ ಕರೆಸಿದರು.</p>.<p>ಮೃತದೇಹದ ಮೈಮೇಲಿದ್ದ ಉಡುಪು ನೋಡಿದ ದೀಪಾ, ‘ಇವರು ನನ್ನ ಪತಿಯಲ್ಲ’ ಎಂದಿದ್ದರು. ಆದರೆ ದೇಹದ ಮುಖಭಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದರು.</p>.<p>ಇದೆಲ್ಲಾ ಮುಗಿದ ನಂತರ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಕಾಣಿಸಿಕೊಂಡ ಶಿವಣ್ಣನನ್ನು ಊರಿಗೆ ಕರೆದುಕೊಂಡು ಬಂದಿದ್ದಾರೆ.</p>.<p>‘ನನ್ನ ಪತಿ ಸತ್ತಿಲ್ಲ ಎಂಬ ನಂಬಿಕೆ ಇತ್ತು. ಅಂದು ಪೊಲೀಸರಿಗೆ ಮೃತದೇಹ ಪತಿಯದಲ್ಲ ಎಂದು ಹೇಳಿದ್ದರೂ ಕೇಳಲಿಲ್ಲ. ಒಲ್ಲದ ಮನಸ್ಸಿನಿಂದಲೇ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಶಿವಣ್ಣನ ಪತ್ನಿ ದೀಪಾ ತಿಳಿಸಿದರು.</p>.<p>‘ಬೇಜಾರಾಗಿ ನಾಲ್ಕು ದಿನ ಹೊರಗೆ ಇದ್ದು ಬರೋಣ ಎಂದು ಮನೆ ಬಿಟ್ಟು ಹೋಗಿದ್ದೆ. ಮೊದಲು ತುಮಕೂರಲ್ಲಿ ಹೋಟೆಲ್ ಸೇರಿದೆ. ಅಲ್ಲಿ ವಾತಾವರಣ ಹಿಡಿಸದ ಕಾರಣ ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದೆ’ ಎಂದು ಬದುಕಿ ಬಂದ ಶಿವಣ್ಣ ಹೇಳಿದರು.</p>.<p>ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ಯಾರದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>