ಕೃಷಿ ತಜ್ಞ ಡಾ.ಪ್ರಕಾಶ ಕಮ್ಮರಡಿ, ‘ಈ ಮಸೂದೆಯು ಭರವಸೆಯನ್ನು ಹುಟ್ಟಿಸುವ ಬದಲು ಆತಂಕ, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಿದೇಶಿ ಕಂಪನಿಗಳು ಬೀಜಗಳನ್ನು ಅಲ್ಲಿಯೇ ನೋಂದಣಿ ಮಾಡಿ, ಈ ದೇಶಕ್ಕೆ ತರಲು ಅವಕಾಶವಿದೆ. ಒಂದು ವೇಳೆ ಆ ಬೀಜಗಳಿಂದ ನಿಗದಿತ ಪ್ರಮಾಣದಲ್ಲಿ ಇಳುವರಿ ಬಾರದಿದ್ದಲ್ಲಿ ಯಾವ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತದೆ ಎಂಬ ಸ್ಪಷ್ಟನೆ ಇಲ್ಲ’ ಎಂದರು.