ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ.
ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎನ್.ತಿಪ್ಪಣ್ಣ ಚುನಾಯಿತರಾಗಿದ್ದಾರೆ. ರಾಜ್ಯದ 90 ತಾಲ್ಲೂಕು ಘಟಕಗಳು, 5 ಜಿಲ್ಲಾ ಘಟಕಗಳು, 2 ಮಹಾನಗರ ಪಾಲಿಕೆ ಘಟಕಗಳು, ರಾಜ್ಯ ಘಟಕ ಹಾಗೂ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು.
ಕೇರಳದಲ್ಲಿನ 11 ತಾಲ್ಲೂಕು ಘಟಕಗಳು ಹಾಗೂ 2 ಜಿಲ್ಲಾ ಘಟಕಗಳ ಪದಾಧಿಕಾರಿಗಳ ಆಯ್ಕೆಯೂ ಈ ಚುನಾವಣೆ ಒಳಗೊಂಡಿತ್ತು.
** ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ–ಲಿಂಗಾಯತ ಭವನ ಮತ್ತು ಬೆಂಗಳೂರಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ. -ಶಾಮನೂರು ಶಿವಶಂಕರಪ್ಪ