‘ಯಡಿಯೂರಪ್ಪ ಜತೆ ಬೆಳಗಾವಿಗೆ ಬಂದಿದ್ದ ರವಿಕುಮಾರ್ ವಾಪಸ್ ಬೆಂಗಳೂರಿಗೆ ಬರಲು ಬೇರೊಂದು ವಿಮಾನದಲ್ಲಿ ಟಿಕೆಟ್ ಮಾಡಿಸಿದ್ದರು. ತಾವು ಹುಬ್ಬಳ್ಳಿಗೆ ಬರದೇ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಹುಬ್ಬಳ್ಳಿಗೆ ಹೊರಟಿದ್ದ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ ಶೋಭಾ, ರವಿಕುಮಾರ್ ಅವರನ್ನು ಬಿಟ್ಟು ಹೋಗುತ್ತೀದ್ದರಲ್ಲ ಎಂಬರ್ಥದಲ್ಲಿ ಪ್ರಶ್ನಿಸಿದರು. ಹಿಂದೆ ನಡೆದ ಸಂಗತಿಗಳು ಗೊತ್ತಿಲ್ಲದೇ ಕೊನೆಯ ಮಾತನ್ನಷ್ಟೇ ಕೇಳಿಸಿಕೊಂಡಿದ್ದರಿಂದಾಗಿ ಮಾಹಿತಿಗಳು ತಪ್ಪಾಗಿ ಬಿಂಬಿತವಾಗಿವೆ’ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು