ವಿಶ್ವನಾಥ್ ಮಾತನಾಡಿ, ‘ರಾಜಕಾರಣ ಬರುತ್ತೆ, ಹೋಗುತ್ತೆ. ಕಾವೇರಿ ನದಿ ಹರಿದು ಮುಂದೆ ಸಂಗಮವಾಗುತ್ತದೆ. ಹಾಗೆಯೇ, ಇದೊಂದು ದೊಡ್ಡ ಸಂಗಮ. ಈಶ್ವರಪ್ಪ ಜೊತೆ ಸೇರಿದ ಮೇಲೆ ಬಾಡು ಬಳ್ಳೆ ಬಿಟ್ಟಿದ್ದೇನೆ. ಅವರನ್ನು ಕೆ.ಆರ್.ನಗರದ ನಮ್ಮ ಮನೆಗೆ ಕರೆದುಕೊಂಡು ಹೋಗಿ ಸಸ್ಯಾಹಾರಿ ಊಟ ಬಡಿಸುತ್ತೇನೆ. ಸಿದ್ದರಾಮಯ್ಯ ಇನ್ನೂ ಬಾಡು ಬಳ್ಳೆ ಇಟ್ಟುಕೊಂಡಿದ್ದಾರೆ. ದೊಡ್ಡಕೊಪ್ಪಲು ಗ್ರಾಮದ ರೇವಣ್ಣರ ಮನೆಯಲ್ಲಿ ಹಾವು ಮೀನು, ನಾಟಿ ಕೋಳಿ ಸಾರಿನ ಊಟ ಸೇವಿಸುತ್ತಾರೆ. ಅವರನ್ನು ಬಿಟ್ಟು ವಿಶ್ವನಾಥ್ ಮತ್ತು ಈಶ್ವರಪ್ಪ ಒಟ್ಟಿಗೆ ಊಟಕ್ಕೆ ಹೋದರು ಎಂಬುದಾಗಿ ತಪ್ಪು ಭಾವಿಸಬೇಡಿ’ ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ.