‘ಸದ್ಯಕ್ಕೆ ರಾಜೀನಾಮೆ ಕೊಡುವುದಿಲ್ಲ. ಮೊದಲು ಐದಾರು ಜನರು ಕೊಡಲಿ. ಆಮೇಲೆ ನಾವು ಕೊಡುತ್ತೇವೆ’ ಎಂದು ಬಿ.ಸಿ. ಪಾಟೀಲ ಹೇಳುತ್ತಿದ್ದಾರಂತೆ. ‘ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ’ ಎಂದು ನಾಗೇಂದ್ರ ಪ್ರತಿಪಾದಿಸಿದ್ದಾರೆ. ಹೀಗಾಗಿ, ಗುರುವಾರ ಯಾರೂ ಕೊಡಲಿಲ್ಲ. ಅಧಿವೇಶನದ ಹೊತ್ತಿಗೆ ದೊಡ್ಡ ಮಟ್ಟದ ಗುಂಪು ರಾಜೀನಾಮೆ ಕೊಟ್ಟು, ಮೈತ್ರಿ ಸರ್ಕಾರವನ್ನು ಅಪಾಯಕ್ಕೆ ಸಿಲುಕಿಸಲಿದೆ’ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.