ಬೆಂಗಳೂರು: ಸಮರ್ಥ ಭಾರತ ಸಂಸ್ಥೆಯು 'ಪರಿಸರ ಸಪ್ತಾಹ ಅಭಿಯಾನ'ದ ಅಂಗವಾಗಿ ಹಮ್ಮಿಕೊಂಡಿರುವ ಸರಣಿ ಉಪನ್ಯಾಸಗಳ ಸಮಾರೋಪ ಕಾರ್ಯಕ್ರಮ ಇದೇ 8ರಂದು ಸಂಜೆ 6.30ಕ್ಕೆ ಫೇಸ್ಬುಕ್ ಲೈವ್ನಲ್ಲಿ ನಡೆಯಲಿದೆ.
ಸಮಾರೋಪದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು 'ಪರಿಸರ ಸಂರಕ್ಷಣೆ:ನಮ್ಮ ಪಾತ್ರ' ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವನ್ನು ಸಂಸ್ಥೆಯ ಫೇಸ್ಬುಕ್ ಪುಟ www.facebook.com/SamarthaBharataದಲ್ಲಿ ವೀಕ್ಷಿಸಬಹುದು.