ವಿವಿಧೆಡೆ ಇದ್ದ ಬೇಡಿಕೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆರಗ, ಸರಳ, ಕೈಮರ, ಮೇಳಿಗೆ ಇನ್ನಿತರ ಕಡೆಗಳಲ್ಲಿ ನೂರಾರು ಟನ್ ಬೂದುಗುಂಬಳ ಬೆಳೆ ಕೊರೊನಾ ಲಾಕ್ಡೌನ್ ನಿಂದಾಗಿ ಮಾರಾಟವಾಗದೇ ಕೊಳೆಯಹತ್ತಿತ್ತು. ತಾಲ್ಲೂಕು ಆಡಳಿತ ಬೆಳೆಗಾರರ ರಕ್ಷಣೆಗೆ ಮುಂದಾದರೂ ಕುಂಬಳ ರಾಶಿ ಕೊಂಡು ಏನು ಮಾಡುವುದು? ಎಲ್ಲಿ ಹಂಚುವುದು? ಎಂಬ ಚಿಂತೆಯಲ್ಲಿ ಮುಳುಗಿತು.