‘ಸೋದೆಪೇಟೆಯಲ್ಲಿ ಮುಸ್ಲಿಂ ಕುಟುಂಬಗಳು ವಾಸಿಸುವ ಸ್ಥಳದಲ್ಲಿ ಈ ಗುಡಿ ಇತ್ತು. ಭಾಗಶಃ ಮಣ್ಣಿನಿಂದ ಮುಚ್ಚಿದ್ದ ಇದರಲ್ಲಿ ಗಿಡ–ಗಂಟಿ, ಪೊದೆಗಳು ಬೆಳೆದಿದ್ದವು. ಹಾವು, ವಿಷಜಂತು ಇರಬಹುದೆಂಬ ಭಯಕ್ಕೆ ಯಾರೂ ಆ ಕಡೆ ಹೋಗುತ್ತಿರಲಿಲ್ಲ. ಅಬ್ದುಲ್ ಸಲಾಂ ರಜಾಕ್ ಶೇಖ್, ಅಬ್ದುಲ್ ಮುತಲಿಬ್ ಅಬ್ದುಲ್ ಶೇಖ್, ಹುಸೇನ್ ಸಾಬ್ ಖಾಸೀಂ ಸಾಬ್, ಅಬ್ದುಲ್ ಗಫೂರ್ ಮೊಯ್ದಿನ್ ಸಾಬ್, ಮುನ್ನಾ ಸಾಬ್, ಅಬ್ದುಲ್ ಖುದ್ದುಸ್ ಅಬ್ದುಲ್ ಸಲಾಂ ಶೇಖ್ ಹಾಗೂ ಅಬ್ದುಲ್ ಗಫಾರ್ ಅಬ್ದುಲ್ ರಜಾಕ್ ಶೇಖ್, ಯುಸೂಫ್ ಖಾನ್ ಅಹ್ಮದ್ ಖಾನ್ ಅವರು ಗಿಡ–ಗಂಟಿ, ಮಣ್ಣನ್ನು ತೆರವುಗೊಳಿಸಿದ್ದರಿಂದ ಗುಡಿ ಇರುವುದು ಗೊತ್ತಾಯಿತು’ ಎಂದು ಜಾಗೃತ ವೇದಿಕೆ ಪ್ರಮುಖರು ತಿಳಿಸಿದ್ದಾರೆ.