<p><strong>ಬೆಂಗಳೂರು:</strong> ‘ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ದೇಶಿಸಬೇಕು' ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ (ಪಿಐಎಲ್) ಅರ್ಜಿದಾರ ಮನೋವೈದ್ಯರಿಗೆ ಹೈಕೋರ್ಟ್ ₹10 ಸಾವಿರ ದಂಡ ವಿಧಿಸಿದೆ.</p>.<p>ಈ ಕುರಿತು ಹುಬ್ಬಳ್ಳಿಯ ಮನೋವೈದ್ಯ ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಜಾ ಮಾಡಿದೆ.</p>.<p>‘ಆಹಾರ, ಚಿಕಿತ್ಸೆಯ ಬಗ್ಗೆ ಆದ್ಯತೆ ನೀಡಬೇಕಾದ ಸಂದರ್ಭವಿದು. ಮದ್ಯಪಾನ ತ್ಯಜಿಸಲು ಆಪ್ತ ಸಮಾಲೋಚನೆಗೆ ಇಂಬು ನೀಡಬೇಕಾದಂಥವರು ಮದ್ಯದ ಬಗ್ಗೆ ಕಾಳಜಿ ತೋರಿದ್ದಾರೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.</p>.<p>ದಂಡದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಅರ್ಜಿದಾರರಿಗೆ ಆದೇಶಿಸಿದೆ.</p>.<p class="Subhead"><strong>ಅರ್ಜಿಯಲ್ಲಿ ಏನಿತ್ತು?:</strong>‘ಹಿಂದೂ ಸಂಸ್ಕೃತಿಯ ಪ್ರಾಚೀನ ಹಸ್ತಪ್ರತಿಗಳಲ್ಲಿ ಸೋಮರಸ ಸೇವನೆಯ ಉಲ್ಲೇಖವಿದೆ. ಅಂದಿನ ಸೋಮರಸವೇ ಇಂದಿನ ಆಲ್ಕೋಹಾಲ್. ಇದರ ಸೇವನೆಯಿಂದ ದೇಹ ಮತ್ತು ಮನಸ್ಸಿಗೆ ಕೊಂಚ ನಿರಾಳತೆ ಲಭಿಸುತ್ತದೆ ಎಂಬುದನ್ನು ಮನೋವೈದ್ಯ ಶಾಸ್ತ್ರದ ಆಧಾರದಲ್ಲಿ ಗಮನಿಸಬೇಕಾದ ಅವಶ್ಯಕತೆ ಇದೆ’ ಎಂದು ಅರ್ಜಿದಾರರು ತಿಳಿಸಿದ್ದರು.</p>.<p>‘ಮದ್ಯಪಾನದ ಚಟ ಅಂಟಿಸಿಕೊಂಡವರುಏಕಾಏಕಿ ಸ್ಥಗಿತಗೊಳಿಸಿದರೆ ‘ಡಿಲಿರಿಯಮ್’ ಎಂಬ ಸ್ಥಿತಿಗೆ ಜಾರುತ್ತಾರೆ. ಇದು ಅವರನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದಿಸಬಲ್ಲದು. ಮೈನಡುಕ, ಭ್ರಮೆ, ನಿದ್ರಾಹೀನತೆಯಂತಹಸಮಸ್ಯೆಗೂ ಈಡು ಮಾಡಬಲ್ಲದು. ಫಿಟ್ಸ್ ನಂತಹ ಕಾಯಿಲೆ ಬರುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದ್ದರು.</p>.<p>‘ಮದ್ಯ ನಿರಾಕರಣೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಏಳು ಜನ ಮದ್ಯವ್ಯಸನಿಗಳು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಾದ್ಯಂತ ವಿವಿಧೆಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ’ ಎಂದು ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ದೇಶಿಸಬೇಕು' ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ (ಪಿಐಎಲ್) ಅರ್ಜಿದಾರ ಮನೋವೈದ್ಯರಿಗೆ ಹೈಕೋರ್ಟ್ ₹10 ಸಾವಿರ ದಂಡ ವಿಧಿಸಿದೆ.</p>.<p>ಈ ಕುರಿತು ಹುಬ್ಬಳ್ಳಿಯ ಮನೋವೈದ್ಯ ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಜಾ ಮಾಡಿದೆ.</p>.<p>‘ಆಹಾರ, ಚಿಕಿತ್ಸೆಯ ಬಗ್ಗೆ ಆದ್ಯತೆ ನೀಡಬೇಕಾದ ಸಂದರ್ಭವಿದು. ಮದ್ಯಪಾನ ತ್ಯಜಿಸಲು ಆಪ್ತ ಸಮಾಲೋಚನೆಗೆ ಇಂಬು ನೀಡಬೇಕಾದಂಥವರು ಮದ್ಯದ ಬಗ್ಗೆ ಕಾಳಜಿ ತೋರಿದ್ದಾರೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.</p>.<p>ದಂಡದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಅರ್ಜಿದಾರರಿಗೆ ಆದೇಶಿಸಿದೆ.</p>.<p class="Subhead"><strong>ಅರ್ಜಿಯಲ್ಲಿ ಏನಿತ್ತು?:</strong>‘ಹಿಂದೂ ಸಂಸ್ಕೃತಿಯ ಪ್ರಾಚೀನ ಹಸ್ತಪ್ರತಿಗಳಲ್ಲಿ ಸೋಮರಸ ಸೇವನೆಯ ಉಲ್ಲೇಖವಿದೆ. ಅಂದಿನ ಸೋಮರಸವೇ ಇಂದಿನ ಆಲ್ಕೋಹಾಲ್. ಇದರ ಸೇವನೆಯಿಂದ ದೇಹ ಮತ್ತು ಮನಸ್ಸಿಗೆ ಕೊಂಚ ನಿರಾಳತೆ ಲಭಿಸುತ್ತದೆ ಎಂಬುದನ್ನು ಮನೋವೈದ್ಯ ಶಾಸ್ತ್ರದ ಆಧಾರದಲ್ಲಿ ಗಮನಿಸಬೇಕಾದ ಅವಶ್ಯಕತೆ ಇದೆ’ ಎಂದು ಅರ್ಜಿದಾರರು ತಿಳಿಸಿದ್ದರು.</p>.<p>‘ಮದ್ಯಪಾನದ ಚಟ ಅಂಟಿಸಿಕೊಂಡವರುಏಕಾಏಕಿ ಸ್ಥಗಿತಗೊಳಿಸಿದರೆ ‘ಡಿಲಿರಿಯಮ್’ ಎಂಬ ಸ್ಥಿತಿಗೆ ಜಾರುತ್ತಾರೆ. ಇದು ಅವರನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದಿಸಬಲ್ಲದು. ಮೈನಡುಕ, ಭ್ರಮೆ, ನಿದ್ರಾಹೀನತೆಯಂತಹಸಮಸ್ಯೆಗೂ ಈಡು ಮಾಡಬಲ್ಲದು. ಫಿಟ್ಸ್ ನಂತಹ ಕಾಯಿಲೆ ಬರುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದ್ದರು.</p>.<p>‘ಮದ್ಯ ನಿರಾಕರಣೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಏಳು ಜನ ಮದ್ಯವ್ಯಸನಿಗಳು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಾದ್ಯಂತ ವಿವಿಧೆಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ’ ಎಂದು ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>