ಅಸ್ಸಾಂನಲ್ಲಿ 18 ಲಕ್ಷ ಮಂದಿ ಬಂಧನದಲ್ಲಿದ್ದಾರೆ ಎಂದು ಐವನ್ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಆಗ ಕೆರಳಿ ಕೆಂಡವಾದರು. ‘ಅಸ್ಸಾಂನಲ್ಲಿ ಬಂಧನದಲ್ಲಿರುವ ಒಬ್ಬನ ಹೆಸರು ಹೇಳಿದರೆ ನನ್ನ ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡುತ್ತೇನೆ’ ಎಂದು ಬಿಜೆಪಿಯ ಎನ್.ರವಿಕುಮಾರ್ ಸವಾಲು ಎಸೆದರು. ಐವನ್ ಅವರನ್ನು ಸಮರ್ಥಿಸುವಲ್ಲಿ ವಿಫಲರಾದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮತ್ತು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ವಿಷಯ ಬಿಟ್ಟು ಐವನ್ ಮಾತನಾಡಿದ್ದು ತಪ್ಪು, ದೇಶ ಅಖಂಡವಾಗಿದ್ದು, ಅದರ ಬಗ್ಗೆ ಹೇಳಿಕೆ ನೀಡಬಾರದಿತ್ತು ಎಂದರು.