ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರಿಂದ ನಾವು ಕಲಿಯುವಂಥದ್ದಿದೆ ಎಂದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ಕುಮಾರ್ ಅವರ ಪತ್ನಿ ತೇಜಸ್ವನಿ ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.
ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ😇,
ಇದನ್ನು ನಾವೆಲ್ಲ ಕಲಿಲೇಬೇಕು.
ಯಾಕೆ ಗೊತ್ತಾ ?
ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವುದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ
ಸ್ಟ್ರಾ ಉಪಯೋಗ ಬಿಟ್ಹಾಕೋಣ.
— Chowkidar Tejaswini AnanthKumar (@Tej_AnanthKumar) April 6, 2019
ಮಂಡ್ಯದಲ್ಲಿ ಪ್ರಚಾರ ನಿರತರಾಗಿರುವ ನಿಖಿಲ್ ಅವರು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಸ್ಟ್ರಾ ಬಳಸದೇ ಎಳನೀರನ್ನು ಒಂದೇ ಬಾರಿಗೆ ಕುಡಿದ್ದದನ್ನು ಕನ್ನಡದ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಇದೇ ಹಿನ್ನೆಲೆಯಲ್ಲಿ ಶನಿವಾರ ಟ್ವೀಟ್ ಮಾಡಿರುವ ತೇಜಸ್ವಿನಿ ಅವರು, ‘ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ. ಇದನ್ನು ನಾವೆಲ್ಲ ಕಲಿಲೇಬೇಕು. ಬಳಸಿ ಎಸಿದೆ ಸ್ಟ್ರಾಗಳು ನೀರಿಗೋ, ಕಾಡಿಗೋ, ಭೂಮಿಗೋ ಸೇರಿ ಮೂಕಪ್ರಾಣಿಗಳಿಗೆ ತೊಂದರೆ.ಸ್ಟ್ರಾ ಉಪಯೋಗ ಬಿಟ್ಹಾಕೋಣ,‘ ಎಂದು ಟ್ವೀಟ್ ಮಾಡಿದ್ದಾರೆ.
ತೇಜಸ್ವಿನಿ ಅವರು ಪತಿಗೆ ರಾಜಕೀಯವಾಗಿ ನೆರವಾಗುತ್ತಲೇ, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದವರು. ಅದಮ್ಯ ಚೇತನ ಎಂಬ ಸಂಸ್ಥೆಯ ಮೂಲಕ ಅವರು ಪರಿಸರ ಸಂರಕ್ಷಣೆಯಲ್ಲೂ ನಿರತರಾಗಿದ್ದಾರೆ.
ಇನ್ನು ತೇಜಸ್ವಿನಿ ಅವರ ಟ್ವೀಟ್ ಬಗ್ಗೆ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅವರ ಪರಿಸರ ಕಾಳಜಿಯನ್ನು ಹಲವರು ಪ್ರಶಂಸಿಸಿದ್ದಾರೆ,ಆದರೆ, ನಿಖಿಲ್ ಅವರನ್ನು ಉದಾಹರಣೆಯಾಗಿ ನೀಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪರಿಸರ ಕಾಳಜಿಗೆ
— Chowkidar Ravi (@RaviPatil69) April 6, 2019
ಅಭಿನಂದನೆಗಳು ಮೇಡಮ್🙏.
ಮೇಡಂ, ನಿಮ್ಮ ಪರಿಸರ ಕಾಳಜಿ ಅದ್ವಿತೀಯ. ಅದಮ್ಯ ಚೇತನ ಆಯೋಜನೆಯ ಕಾರ್ಯಕ್ರಮಗಳಲ್ಲಿ , ನಿಮ್ಮ ನಿವಾಸಗಳಲ್ಲಿ, ಅಷ್ಟೇ ಏಕೆ ನಿಮ್ಮ ಪುತ್ರಿಯ ವಿವಾಹದಲ್ಲಿ ಪ್ಲಾಸ್ಟಿಕ್ ಐಟಂಗಳನ್ನು ಬಳಸದೇ ಮಾತಿಕ್ಕಿಂತ ಕೃತಿ ಲೇಸೆಂದು ತೋರಿಸಿದ್ದಿರಿ. ನಿಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಪಾಕಶಾಲೆಯಂತೂ, ಶೂನ್ಯ ತ್ಯಾಜ್ಯ ನಿರ್ವಹಣೆ ಅದ್ಬುತ
— Girish P (@GiriputtaP) April 6, 2019
ಬೇರೆ ಪಕ್ಷದವರನ್ನುಏಕವಚನದಲ್ಲಿ ಸಂಭೋದಿಸುವುದು ತಪ್ಪು ಎಂದು ಕೆಲ ಮಂದಿ ಹೇಳಿದ್ದರೆ, ಚಿಕ್ಕವರನ್ನು ಏಕವಚನದಲ್ಲಿ ಮಾತನಾಡಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಕೆಲವರು ಹೇಳಿದ್ದಾರೆ.
ಬೇರೆ ಪಕ್ಷದವರನ್ನ ಏಕವಚನದಲ್ಲಿ ಮಾತನಾಡಿಸುವುದು ಬೇಡ . 'ಕುಡಿತಾನಂತೆ' ಬದಲು 'ಕುಡಿತಾರಂತೆ' ಅಂತ ಬರೆಯಬಹುದಿತ್ತು. ಸುಮ್ಮನೆ ಅವರ ವ್ಯಂಗಕ್ಕೆ ಆಸ್ಪದ ಮಾಡಿದಂತಾಗುತ್ತದೆ.
— GP Jayanth (@GPJAYANTH) April 6, 2019
ನಿಕಿಲ್ ಗೆ ಸಹಕರಿಸುತಿರುವುದರಿಂದ ಧನ್ಯವಾದಗಳು ಮಾತೆ
— Hemanth L (@HemanthaShuru) April 6, 2019
ಇನ್ನೂ ಕೆಲವರು ನಿಖಿಲ್ ಅವರ ಬಗ್ಗೆ ಗೇಲಿ ಮಾಡಿದ್ದಾರೆ. ಟಿಕೆಟ್ ಸಿಗದಕ್ಕೆ ತೇಜಸ್ವಿನಿ ಅವರು ಅನ್ಯ ಪಕ್ಷದವರನ್ನು ಹೊಗಳುವ ಮೂಲಕ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
— yogeendra (@DoddamaneYogi) April 6, 2019
ಮೇಡಂ, ನಿಮ್ಮ ಪರಿಸರ ಕಾಳಜಿಗೆ ನನ್ನ ಅದಮ್ಯ ನಮನ. ಆದರೆ ನಿಖಿಲ್ ಸ್ಟ್ರಾ ಬಳಸದೆ ಎಳನೀರು ಕುಡಿದದ್ದು, ನಿಮ್ಮ ಕಣ್ಣಿಗೆ ಮೊದಲು ಒಬ್ಬ ವ್ಯಕ್ತಿ ಈ ರೀತಿ ಎಳನೀರು ಕುಡಿಬಹುದು ಅಂತ ಮನವರಿಕೆ ಮಾಡಿಸಿದ್ದೆ ಆದರೆ ಇದು ನಿಮ್ಮ ಅಸಮಾಧಾನ ಹೊರ ಹಾಕುವ ರೀತಿ ಅಂತಾನೆ ನೋಡಬೇಕಾಗುತ್ತೆ. ಏಕೆಂದರೆ, ಎಳನೀರು ಕುಡಿಯುವ ಬಹುತೇಕ ಮಂದಿ ಸ್ಟ್ರಾ ಬಳಸುವುದಿಲ್ಲ.
— Vasanthakumar G Ramu (@ramu_ganga) April 6, 2019
ನಿಮ್ಮ ಪರಿಸರ ಕಾಳಜಿಗೆ ಮೆಚ್ಚುಗೆ ಇದೆ, ಆದರೆ example ಕೊಡುವಾಗ ಬೇರೆಯವರ ಉದಾಹರಣೆ ತೆಗೆದುಕೊಳ್ಳಬಹುದಿತ್ತು, ಬಿಟ್ಟಿ ಪ್ರಚಾರ expect ಮಾಡುವವರಿಗೆ ಪ್ರಚಾರ ಸಿಕ್ಕಿತು. Yash, Darshan ಎಲ್ಲರೂ ಸ್ಟ್ರಾ ಇಲ್ಲದೆ ಎಳನೀರು ಕುಡಿಯುತ್ತಿದ್ದರು.
— Anitha C Poojary (@anitha_poojary) April 6, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.