<p><strong>ಬೆಂಗಳೂರು</strong>: ‘ತಾಪಮಾನ ಏರಿಕೆಯಿಂದ ಸಮುದ್ರಮಟ್ಟವೂ ಏರುತ್ತಿದ್ದು, ತೀರ ಪ್ರದೇಶಗಳು ಜಲಾವೃತವಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಪಶ್ಚಿಮ ಕರಾವಳಿಯ ಶೇ 50ರಷ್ಟು ಭೂಪ್ರದೇಶ ಜಲಾವೃತವಾಗಲಿದೆ’ ಎಂದು ಗೋವಾದ ಪರಿಸರವಾದಿ ಡಾ. ಕ್ಲಾಡೊ ಅಲ್ವಾರಿಸ್ ಕಳವಳ ವ್ಯಕ್ತಪಡಿಸಿದರು.</p>.<p>ನಗರದ ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಪಶ್ಚಿಮ ಘಟ್ಟ ಮತ್ತು ನೀರು’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ‘ಹಲವು ತೀರಗಳ ವಿಸ್ತಾರ ಕಡಿಮೆ ಯಾಗುತ್ತಿದ್ದು, ಸಮುದ್ರ ನೀರು ಈ ಪ್ರದೇಶ ವ್ಯಾಪಿಸುತ್ತಿದೆ’ ಎಂದರು.</p>.<p>‘1960ರಿಂದ 1980ರ ಅವಧಿಯಲ್ಲಿ ಪಶ್ಚಿಮ ಘಟ್ಟದಲ್ಲಿದ್ದಂತಹ ಹವಾಮಾನವೇ ಬೆಂಗಳೂರಿನಲ್ಲಿಯೂ ಇರುತ್ತಿತ್ತು. ಪಶ್ಚಿಮ ಘಟ್ಟದ ವಾತಾವರಣ ಹಾಗೆಯೇ ಇದೆ. ಆದರೆ, ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುತ್ತಿದೆ. 2018 ಮತ್ತು 2019ರಲ್ಲಿ ರಾಜ್ಯ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ. ಈ ವರ್ಷವೂ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ’ ಎಂದರು.</p>.<p>ಬೆಂಗಳೂರಿನಲ್ಲಿ ಪರಿಸರ ರಕ್ಷಿಸುವ ಕೆಲಸ ಆಗಬೇಕಾಗಿದೆ. ಪದವಿ, ಪಡೆಯುವ ಆಚೆಗೂ, ಈ ಕೆಲಸಕ್ಕೆ ಯುವಜನರು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಕೇರಳದಲ್ಲಿ ಮಿತಿಮೀರಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದೆ. ಮೊದಲು ದೇಗುಲಗಳು, ಸಮಾಧಿ ನಿರ್ಮಾಣ ಉದ್ದೇಶಕ್ಕೆ ಮಾತ್ರ ಗ್ರಾನೈಟ್ ಬಳಸಲಾಗುತ್ತಿತ್ತು. ಈಗ ಎಲ್ಲದಕ್ಕೂ ಗ್ರಾನೈಟ್ ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತಿದೆ’ ಎಂದರು.</p>.<p>ಬನ್ನೇರುಘಟ್ಟ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ‘ಅರಣ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಝಡ್) ಯಾವುದೆಂದು ನಿರ್ಧರಿಸುವಲ್ಲಿ ಅರಣ್ಯ ಅಧಿಕಾರಿಗಳ ಪಾತ್ರ ತುಂಬಾ ಕಡಿಮೆ. ಬನ್ನೇರುಘಟ್ಟ ಅರಣ್ಯಪ್ರದೇಶದಲ್ಲಿ ಇಎಸ್ಝಡ್ ಪ್ರದೇಶ ಕಡಿಮೆ ಮಾಡಿರುವುದು ರಾಜ್ಯ ಸರ್ಕಾರದ ನಿರ್ಧಾರ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ತಾಪಮಾನ ಏರಿಕೆಯಿಂದ ಸಮುದ್ರಮಟ್ಟವೂ ಏರುತ್ತಿದ್ದು, ತೀರ ಪ್ರದೇಶಗಳು ಜಲಾವೃತವಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಪಶ್ಚಿಮ ಕರಾವಳಿಯ ಶೇ 50ರಷ್ಟು ಭೂಪ್ರದೇಶ ಜಲಾವೃತವಾಗಲಿದೆ’ ಎಂದು ಗೋವಾದ ಪರಿಸರವಾದಿ ಡಾ. ಕ್ಲಾಡೊ ಅಲ್ವಾರಿಸ್ ಕಳವಳ ವ್ಯಕ್ತಪಡಿಸಿದರು.</p>.<p>ನಗರದ ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಪಶ್ಚಿಮ ಘಟ್ಟ ಮತ್ತು ನೀರು’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ‘ಹಲವು ತೀರಗಳ ವಿಸ್ತಾರ ಕಡಿಮೆ ಯಾಗುತ್ತಿದ್ದು, ಸಮುದ್ರ ನೀರು ಈ ಪ್ರದೇಶ ವ್ಯಾಪಿಸುತ್ತಿದೆ’ ಎಂದರು.</p>.<p>‘1960ರಿಂದ 1980ರ ಅವಧಿಯಲ್ಲಿ ಪಶ್ಚಿಮ ಘಟ್ಟದಲ್ಲಿದ್ದಂತಹ ಹವಾಮಾನವೇ ಬೆಂಗಳೂರಿನಲ್ಲಿಯೂ ಇರುತ್ತಿತ್ತು. ಪಶ್ಚಿಮ ಘಟ್ಟದ ವಾತಾವರಣ ಹಾಗೆಯೇ ಇದೆ. ಆದರೆ, ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುತ್ತಿದೆ. 2018 ಮತ್ತು 2019ರಲ್ಲಿ ರಾಜ್ಯ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ. ಈ ವರ್ಷವೂ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ’ ಎಂದರು.</p>.<p>ಬೆಂಗಳೂರಿನಲ್ಲಿ ಪರಿಸರ ರಕ್ಷಿಸುವ ಕೆಲಸ ಆಗಬೇಕಾಗಿದೆ. ಪದವಿ, ಪಡೆಯುವ ಆಚೆಗೂ, ಈ ಕೆಲಸಕ್ಕೆ ಯುವಜನರು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಕೇರಳದಲ್ಲಿ ಮಿತಿಮೀರಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದೆ. ಮೊದಲು ದೇಗುಲಗಳು, ಸಮಾಧಿ ನಿರ್ಮಾಣ ಉದ್ದೇಶಕ್ಕೆ ಮಾತ್ರ ಗ್ರಾನೈಟ್ ಬಳಸಲಾಗುತ್ತಿತ್ತು. ಈಗ ಎಲ್ಲದಕ್ಕೂ ಗ್ರಾನೈಟ್ ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತಿದೆ’ ಎಂದರು.</p>.<p>ಬನ್ನೇರುಘಟ್ಟ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ‘ಅರಣ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಝಡ್) ಯಾವುದೆಂದು ನಿರ್ಧರಿಸುವಲ್ಲಿ ಅರಣ್ಯ ಅಧಿಕಾರಿಗಳ ಪಾತ್ರ ತುಂಬಾ ಕಡಿಮೆ. ಬನ್ನೇರುಘಟ್ಟ ಅರಣ್ಯಪ್ರದೇಶದಲ್ಲಿ ಇಎಸ್ಝಡ್ ಪ್ರದೇಶ ಕಡಿಮೆ ಮಾಡಿರುವುದು ರಾಜ್ಯ ಸರ್ಕಾರದ ನಿರ್ಧಾರ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>