ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿದ್ದ ನರಸಮ್ಮ ಕಾಶಪ್ಪ ಚಿನ್ನಾಕಾರ (55) ವರ್ಷದ ಮಹಿಳೆ ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ.
ಇದೇ ಮೇ 19 ರಂದು ಮುಂಬೈನಿಂದ ಬಂದಿದ್ದು, ಪತಿ ಜೊತೆಗೆ ಚಿನ್ನಾಕಾರ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು.
'ಸಾವಿನ ಬಳಿಕ ಮಹಿಳೆ ಗಂಟಲು ದ್ರವ ಪಡೆದು ಕೋವಿಡ್ ಟೆಸ್ಟ್ಗೆ ರವಾನಿಸಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ' ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ ತಿಳಿಸಿದ್ದಾರೆ.